ಭಾರತೀಯ ಜನತಾ ಪಕ್ಷವು ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಜಕೀಯ ಸಂಘಟನೆ ಹಾಗು ಪರಿಣಾಮಕಾರಿ ಜನಪರ ಆಡಳಿತಾತ್ಮಕ ನಿಲುವುಗಳಲ್ಲಿ ಜನರ ಮನಸ್ಸಿನಲ್ಲಿ ಒಲವು ಗಳಿಸುತ್ತಿದ್ದಂತೆಯೇ ಪಕ್ಷದ ಕಾರ್ಯಕರ್ತರು ಕೂಡ ದೇಶಾದ್ಯಂತ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿ ಕೊಂಡು ಇಂದು ಜಗತ್ತಿನ ಅತೀ ದೊಡ್ಡ ರಾಜಕೀಯ ಪಕ್ಷವಾಗಿ ಮೂಡಿ ಬರಲು ಕಾರಣಿಕರ್ತರಾಗಿದ್ದರೆ ಎಂದು ಶಾಸಕ ಕೆ. ರಘುಪತಿ ಭಟ್ ಅಭಿಮತ ವ್ಯಕ್ತ ಪಡಿಸಿದರು.
ಅವರು ಉಡುಪಿ ಕಿನ್ನಿಮೂಲ್ಕಿ ವೀರಭದರ ದೇವಸ್ಥಾನದ ಸಭಾಂಗಣದಲ್ಲಿ ಭಾರತೀಯ ಜನತಾ ಪಕ್ಶ ಉಡುಪಿ ನಗರ ಇದರ ಆಶ್ರಯದಲ್ಲಿ ಕಿನ್ನಿಮೂಲ್ಕಿ ಶಕ್ತಿ ಕೇಂದ್ರ ಅಧ್ಯಕ್ಷರ ಹಾಗು ಅದರ ವ್ಯಾಪ್ತಿಯ ಬೂತ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಿಷನ್ ಕಿನ್ನಿಮೂಲ್ಕಿ ಅಭಿಯಾನ: ದಶಕಗಳಿಂದ ಕಾಂಗ್ರೆಸ್ ದಬ್ಬಾಳಿಕೆಯಿಂದ ರೋಸಿ ಹೋಗಿರುವ ಈ ಭಾಗದ ಪಕ್ಷದ ಕಾರ್ಯಕರ್ತರಿಗೆ ಹೊಸ ಚೈತನ್ಯ ತುಂಬುವ ಮಿಷನ್ ಕಿನ್ನಿಮೂಲ್ಕಿ ಅಭಿಯಾನ ಪ್ರಾರಂಭಿಸಿ ಹೊಸ ರೂಪು ರೇಷೆಗಳೊಂದಿಗೆ ಇಲ್ಲಿನ ಪಕ್ಷ ಸಂಘಟನೆಗೆ ಜೀವ ತುಂಬುವ ಬಗ್ಗೆ ಗಂಬೀರ ಚಿಂತನೆಗಳು ನಡೆದಿವೆ. ಆ ನಿಟ್ಟಿನಲ್ಲಿ ಯುವ ಶಕ್ತಿಗಳು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಳ್ಳಬೇಕು ಎಂದು ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಹೇಳಿದರು.
ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ನಗರ ಬಿಜೆಪಿ ಪ್ರದಾನ ಕರ್ಯರ್ಶಿಗಳಾದ ದಿನೇಶ್ ಅಮೀನ್, ಮಂಜುನಾಥ್ ಮಣಿಪಾಲ, ಮಹಿಳಾ ಮೋರ್ಚಾ ಅಧ್ಯಕ್ಷೆ ಸರೋಜಾ ಶೆಟ್ಟಿಗಾರ್, ತೆಂಕಪೇಟೆ ಮಹಾಶಕ್ತಿ ಕೇಂದ್ರ ಸಂಚಾಲಕ ಯಶವಂತ್ ಸುವರ್ಣ, ಕಿನ್ನಿಮೂಲ್ಕಿ ಶಕ್ತಿ ಕೇಂದ್ರ ಸಂಚಾಲಕ ಅರವಿಂದ್ ಪದ್ಮಶಾಲಿ, ಸಹ ಸಂಚಾಲಕ ನಿತೇಶ್.
ಬೂತ್ ಅಧ್ಯಕ್ಷರುಗಳಾದ ಗುರುಪ್ರಸಾದ್, ಹರೀಶ್ ಶೆಟ್ಟಿಗಾರ್, ಜಿತೇನ್ ನಾಯಕ್, ಮುರಳೀಧರ್ ರಾವ್, ನಗರ ಕಾನೂನು ಮತ್ತು ಸಂಸದೀಯ ಪ್ರಕೋಷ್ಠ ಸಂಚಾಲಕ ನಾಗರಾಜ್ ಕಿನ್ನಿಮೂಲ್ಕಿ, ಮಹಾಶಕ್ತಿ ಕೇಂದ್ರ ಯುವ ಮೋರ್ಚಾ ಅಧ್ಯಕ್ಷ ಚೇತನ್ ಮತ್ತಿತರರು ಉಪಸ್ಥಿತರಿದ್ದರು. ಪಕ್ಷದ ಹಿರಿಯ ನಾಯಕ ದೇವದಾಸ್ ಶೆಟ್ಟಿಗಾರ್ ಸಂಘಟಿಸಿ ಸಂಘಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಬಿಜೆಪಿ ಕಾರ್ಯದರ್ಶಿ ಲಕ್ಷ್ಮಿ ಪಿ ಶೆಟ್ಟಿ ಕಿನ್ನಿಮೂಲ್ಕಿ ನಿರೂಪಿಸಿದರು.