ಬಡವರ ದೀನದಲಿತರ ಮನೆಯ ಬೆಳಗಿಸಿದ ಆಸರೆ ಚಾರಿಟೇಬಲ್ ಟ್ರಸ್ಟ್- ಡಾ. ಶಶಿಕಿರಣ್ ಉಮಾಕಾಂತ್

ದೀನ ದಲಿತರ ಮನೆಗೆ ಉಚಿತ ವಿದ್ಯುತ್ ಸಂಪರ್ಕ ನೀಡುವುದರ ಮುಖೇನ ಆಸರೆ ಚಾರಿಟೇಬಲ್ ಟ್ರಸ್ಟ್ ಕಡಿಯಾಳಿ ಬಡವರ ಮನೆ ಬೆಳಗಿದೆ ಎಂದು ಉಡುಪಿ ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್ ಹೇಳಿದರು. ಸೋಮವಾರದಂದು ಉಡುಪಿ ಪುತ್ತೂರು ಸುಬ್ರಹ್ಮಣ್ಯನಗರ ವಾರ್ಡಿನ ಕುದ್ಮಲ್ ರಂಗರಾವ್ ನಗರದ ನಿವಾಸಿ ದಲಿತ ಸಮುದಾಯದ ಶ್ರೀಮತಿ ಇಂದಿರಾ ಮತ್ತು ಕುಮಾರಿ ರಶ್ಮಿ ಇವರ ಮನೆಗೆ ಕಲ್ಪಿಸಿದ ಉಚಿತ ವಿದ್ಯುತ್ ಸಂಪರ್ಕ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ದಿವಂಗತರ ಸ್ಮರಣಾರ್ಥ ಈ ಮನೆಗಳಿಗೆ ವಿದ್ಯುತ್ ಸಂಪರ್ಕನೀಡಿದ ಉಡುಪಿಯ ಇಂಜಿನಿಯರ್ ವಿಶ್ವನಾಥ ಭಟ್ ರ ಕುಟುಂಬ ಅಭಿನಂದನಾರ್ಹರು ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗಿದೆ ಎಂದು ಹೇಳಿದರು.

ಈ ಎರಡು ಮನೆಗಳ ವಿದ್ಯುತ್ ಸಂಪರ್ಕದ ವೆಚ್ಚವನ್ನು ದಿವಂಗತ ಶ್ರೀ ಬಿ ವಾದಿರಾಜ್ ಭಟ್ ಅವರ 24 ನೇ ವರ್ಷದ ಪುಣ್ಯತಿಥಿಯ ಸಲುವಾಗಿ ಅವರ ಸ್ಮರಣಾರ್ಥ ಶ್ರೀಮತಿ ಬಿ ವರದಾ ಭಟ್ ಕೊಡವೂರು ನೀಡಿದ್ದಾರೆ. ಆಸರೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷೆ   ಪ.ವಸಂತ ಭಟ್ ಅಧ್ಯಕ್ಷತೆ ವಹಿಸಿದ್ದು ಸುಬ್ರಹ್ಮಣ್ಯ ನಗರ ವಾರ್ಡಿನ ನಗರಸಭಾ ಸದಸ್ಯೆ ಶ್ರೀಮತಿ ಜಯಂತಿ ಪೂಜಾರಿ, ನಗರಸಭಾ ಸದಸ್ಯೆ ಶ್ರೀಮತಿ ಸುಬೇದ, ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನ ಮಂಡಳಿ ಸದಸ್ಯ  ಮಂಜುನಾಥ್ ಹೆಬ್ಬಾರ್, ಸ್ಥಳೀಯ ಯತೀಶ್ ಶೆಣೈ, ಜಯಂತ್ ,ಸತೀಶ್ ಪೂಜಾರಿ, ಶ್ರೀಮತಿ ಲಕ್ಷ್ಮಿ, ಉಪಸ್ಥಿತರಿದ್ದರು.

ಆಸರೆ ಚಾರಿಟೇಬಲ್ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಮತ್ತು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರ್ವಹಿಸಿ, ರಾಕೇಶ್ ಜೋಗಿ ವಂದಿಸಿದರು. ಈ ಮನೆಯ ವಿದ್ಯುತ್ ಸಂಪರ್ಕ ಜೋಡಣೆ ವ್ಯವಸ್ಥೆಯನ್ನು ಮಹಿಷಮರ್ದಿನಿ ಎಲೆಕ್ಟ್ರಿಕಲ್ಸ್ ಕಡಿಯಾಳಿ ಯ ಅಶ್ವಥ್ ದೇವಾಡಿಗ ನಿರ್ವಹಿಸಿರುತ್ತಾರೆ.

 

 
 
 
 
 
 
 
 
 

Leave a Reply