ಆಸರೆ ಚಾರಿಟೇಬಲ್ ಟ್ರಸ್ಟ್ ಕಡಿಯಾಳಿ ವತಿಯಿಂದ 75ನೇ ಮನೆಗೆ ಉಚಿತ ವಿದ್ಯುತ್ ಸಂಪರ್ಕ

 ಉಡುಪಿ: ಆಸರೆ ಚಾರಿಟೇಬಲ್ ಟ್ರಸ್ಟ್( ರಿ) ಕಡಿಯಾಳಿ ವತಿಯಿಂದ ನಗರದ 76ನೇ ಬಡಗಬೆಟ್ಟು ಬೈಲೂರು ಹನುಮಾನ್ ಗ್ಯಾರೇಜ್ ಬಳಿ ನಿವಾಸಿ, ದಲಿತ ಸಮುದಾಯದ ಸುಧಾಕರ ಇವರ ಮನೆಗೆ ವಿದ್ಯುತ್ ಸಂಪರ್ಕ ಮಾಡಲಾಯಿತು.

 ಈ ಮೂಲಕ ಉಡುಪಿ ನಗರದಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಬಡವರ 75ನೇ ಮನೆಗೆ ಆಸರೆಯ ವತಿಯಿಂದ ಉಚಿತ ವಿದ್ಯುತ್ ಸಂಪರ್ಕ ನಡೆಯಿತು.ಉಡುಪಿಯ ಪ್ರಖ್ಯಾತ ಯುವ ಇಂಜಿನಿಯರ್ ರಾಕೇಶ್ ಜೋಗಿ, ಮತ್ತು ಸ್ವಾತಿ ರಾಕೇಶ್ ಜೋಗಿ ದಂಪತಿಗಳು ಉದ್ಘಾಟಿಸಿದರು. 

 ನಗರಸಭಾ ಸದಸ್ಯ ಶ್ರೀಕೃಷ್ಣ ರಾವ್ ಕೊಡಂಚ ತನ್ನ ಹುಟ್ಟುಹಬ್ಬಕ್ಕೆ ದಲಿತರ ಮನೆ ಬೆಳಗಿಸಿದ ಸ್ವಾತಿ ರಾಕೇಶ್ ಇವರಿಗೆ ಅಭಿನಂದಿಸಿದರು. ಆಸರೆ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ವಿದ್ಯಾ ಶಾಂಸುಂದರ್ ಅಧ್ಯಕ್ಷತೆ ವಹಿಸದ್ದರು. ಆಸರೆ ಚಾರಿಟೇಬಲ್ ಟ್ರಸ್ಟ್ ನ ಕೋಶಾಧಿಕಾರಿ ಸತೀಶ್ ಕುಲಾಲ್ ಸ್ವಾಗತಿಸಿ, ನಗರಸಭೆ ಮಾಜಿ ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್ ವಂದಿಸಿದರು. ಶ್ಯಾಮ್ ಸುಂದರ್, ವಿಘ್ನೇಶ್, ಯಶೋಧಾ ಸತೀಶ್, ಉಪಸ್ಥಿತರಿದ್ದರು.ಕಡಿಯಾಳಿ ಮಹಿಷಮರ್ದಿನಿ ಎಲೆಕ್ಟ್ರಿಕಲ್ಸ್ ನ ಆಶ್ವಥ್ ದೇವಾಡಿಗ ವಿದ್ಯುತ್ ಸಂಪರ್ಕವನ್ನು ನಿರ್ವಹಿಸಿದರು.

 
 
 
 
 
 
 
 
 

Leave a Reply