ಆದಿತ್ಯ ಟ್ರಸ್ಟ್ (ರಿ )ನಕ್ರೆ, ಕಾರ್ಕಳ ಇವರ ವತಿಯಿಂದ ಗ್ರಾಮ ಪಂಚಾಯತ್ ಕುಕ್ಕುಂದೂರು, ಪ್ರಾಥಮಿಕ ಅರೋಗ್ಯ ಕೇಂದ್ರ ಕುಕ್ಕುಂದೂರು, ಕೆಎಂಸಿ ಮಣಿಪಾಲ ಇವರ ಜಂಟಿ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಪ್ರಾಥಮಿಕ ಅರೋಗ್ಯ ಕೇಂದ್ರ ನಕ್ರೆ ಇಲ್ಲಿ ನೆರವೇರಿತು.
ಆದಿತ್ಯ ಟ್ರಸ್ಟಿನ ಅಧ್ಯಕ್ಷ ಮಂಜುನಾಥ್ ತೆಂಕಿಲ್ಲಾಯ ಇವರು ಪ್ರಸ್ತವಿಕವಾಗಿ ಟ್ರಸ್ಟ್ ದ್ಯೇಯ ಉದ್ದೇಶಗಳನ್ನು ಹೇಳಿದರು. ಗ್ರಾಮ ಪಂಚಾಯತ್ ಸದಸ್ಯ ಅಂತೋನಿ ಡಿಸೋಜಾ ಮತ್ತು ಪ್ರಾಣೇಶ್ ಶೆಟ್ಟಿ ಇವರು ಪಂಚಾಯತ್ ನಿಂದ ವಿಕಲ ಚೇತನರಿಗೆ ದೊರಕುವ ಸೌಲಭ್ಯ ಗಳನ್ನು ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು.
ನೇತ್ರ ತಜ್ಞ ಡಾ. ನಿಖಿಲ್ ಇವರು ಕಣ್ಣಿನ ಆರೈಕೆ, ಚಿಕಿತ್ಸೆ ಗಳ ಬಗ್ಗೆ ಮಾಹಿತಿ ನೀಡಿದರು. ಡಾ. ಪ್ರತೀಕ್ಷಾ ಶೆಟ್ಟಿ ಇವರು ಆದಿತ್ಯ ಟ್ರಸ್ಟ್ ಇದರ ಕಾರ್ಯ ಯೋಜನೆಗಳ ಬಗ್ಗೆ ಶ್ಲಾಘೀಸಿದರು. ಚುಶನ್ ಚಾರಿಟೇಬಲ್ ಟ್ರಸ್ಟ್ (ರಿ )ಇದರ ಆಡಳಿತಧಿಕಾರಿ ಅಭಿಗೆಲ್ ಶಲ್ಡನ್ ಅಂಚನ್ ಇವರನ್ನು ಸನ್ಮಾನಿಸಲಾಯಿತು. ವಿಕಲ ಚೇತನ ಫಲನುಭವಿಗೆ ಆರ್ಥಿಕಸಹಾಯ ನೀಡಲಾಯಿತು. ರಮೇಶ್ ಇವರು ಕಾರ್ಯಕ್ರಮ ನಿರ್ವಹಿಸಿದರು.