​ಪ್ರಧಾನ ಮಂತ್ರಿ ಸೇವಾಸಪ್ತಾಹ

ಮಣಿಪಾಲದಲ್ಲಿ ಚಾಲನೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಜನ್ಮದಿನಾಚರಣೆಯ ಪ್ರಯುಕ್ತ ನಡೆಯುವ ಸೇವಾ ಸಪ್ತಾಹದ ಕಾರ‍್ಯಕ್ರಮಗಳ ಅಂಗವಾಗಿ ಭಾರತೀಯ ಜನತಾ ಪಕ್ಷ  ಉಡುಪಿ ನಗರ ಆಶ್ರಯದಲ್ಲಿ ಹಾಗು ಯುವ ಮರ‍್ಚಾ ಸಹಭಾಗಿತ್ವದಲ್ಲಿ ಆಯೋಜಿಸಿದ ಸ್ವಚ್ಛತಾ ಅಭಿಯಾನಕ್ಕೆ  ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸರಳೆಬೆಟ್ಟು ಉಮಾಮಹೇಶ್ವರ ದೇವಸ್ಥಾನದಲ್ಲಿ ಚಾಲನೆ ನೀಡಿದರು.
ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ನೇತೃತ್ವದಲ್ಲಿ ನಡೆದ ಈ ಅಭಿಯಾನದಲ್ಲಿ ದೇವಸ್ಥಾನ ಹಾಗು ದೇವಸ್ಥಾನದ ಪರಿಸರವನ್ನು ಸಂಪೂರ್ಣ ಸ್ವಚ್ಛಗೊಳಿಸಲಾಯಿತು. ನಗರಸಭಾ ಸದಸ್ಯರಾದ ವಿಜಯಲಕ್ಷ್ಮಿ, ಮಂಜುನಾಥ್ ಮಣಿಪಾಲ, ಅಶ್ವಿನಿ ಅರುಣ್ ಪೂಜಾರಿ, ಕಲ್ಪನಾ ಸುಧಾಮ, ನಗರ ಯುವಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ಪದಾಧಿಕಾರಿಗಳಾದ ಸುಶಾಂತ್ ಪೂಜಾರಿ, ಪ್ರಜಿತ್ ಕಲ್ಮಾಡಿ, ಸಂದೇಶ್ ಪ್ರಭು, ಹೆರ್ಗ  ಮಹಾಶಕ್ತಿ ಕೇಂದ್ರದ ಯುವ ಮೋರ್ಚಾ ಪದಾಧಿಕಾರಿಗಳು, ಪಕ್ಷದ ಪ್ರಮುಖರುಗಳು ಭಾಗವಹಿಸಿದರು.
 
 
 
 
 
 
 
 
 

Leave a Reply