ಪರ್ಕಳ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ

 

ಪರ್ಕಳ ಲಯನ್ಸ್ ಕ್ಲಬ್ ವತಿಯಿಂದಉಡುಪಿ ಸರಕಾರಿ ಪದವಿಪೂರ್ವ ಕಾಲೇಜು, ಉದ್ಯಾವರ ಇಲ್ಲಿ ಶಿಕ್ಷಕ ದಿನಾಚರಣೆಯ ಆಚರಿಸಲಾಯಿತು. ಸಂಸ್ಥೆಯಲ್ಲಿ ಹಿರಿಯ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿರುವ ದಿನೇಶ್ ಕುಮಾರ್ ಇವರನ್ನು ಅಭಿನಂದಿ ಸಲಾಯಿತು.

ಪ್ರಾಂಶುಪಾಲ ಕೃಷ್ಣಮೂರ್ತಿ, ಹಾಗೂ ಲಯನ್ಸ್ ಕ್ಲಬ್ ಪರ್ಕಳದ ಪದಾಧಿಕಾರಿಗಳು ಹಾಗೂ ಸಂಸ್ಥೆಯ ಉಪನ್ಯಾಸಕರ ಸಮಕ್ಷಮ ಪ್ರಾಂಶುಪಾಲರ ಕೊಠಡಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಕಾರ್ಯದರ್ಶಿ ಮೇಟಿ ಮುದಿಯಪ್ಪ ಅವರ ಪ್ರಾಮಾಣಿಕ ಸೇವೆಯನ್ನು ಪರಿಚಯಿಸಿ, ಎಲೆ ಮರೆಯ ಕಾಯಿಯಂತೆ ಸದಾ ಕಾರ್ಯನಿರತ ನಿಷ್ಠಾವಂತ ಶಿಕ್ಷಕ ಎಂದು ಸ್ಮರಿಸಿಕೊಂಡರು.

ಅಧ್ಯಕ್ಷ ಅಶೋಕ ಪಣಿಯಾಡಿ, ಜೆ.ಪಿ. ಭಂಡಾರಿ, ಸಿದ್ಧರಾಜು, ರಾಧಾಕೃಷ್ಣ ಮೆಂಡನ್, ಜಯರಾಮ ಜಿ., ಸಪ್ನಾ ಸುರೇಶ್ ಹಾಗೂ ಸಂಸ್ಥೆಯ ಉಪನ್ಯಾಸಕರು ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸನ್ಮಾನಿತರು ನಿಮ್ಮ ಗೌರವಕ್ಕೆ ನಾನೆಷ್ಟು ಪಾತ್ರನೋ ಗೊತ್ತಿಲ್ಲ. ಆದರೆ ನಿಮ್ಮ ಈ ವಿಶಾಲ ಮನಸ್ಸಿಗೆ ತಲೆಬಾಗಿ  ನಮಿಸುವೆ ಎಂದು ವಿನಮ್ರತೆಯಿಂದ ವಂದಿಸಿದರು. ಉಪನ್ಯಾಸಕ ಕಿಶೋರ ನಿರೂಪಿಸಿ, ಧನ್ಯವಾದವಿತ್ತರು. 

 
 
 
 
 
 
 
 
 

Leave a Reply