ದೇಶೋದ್ಧಾರಕ್ಕೆ ಕಂಕಣಬದ್ಧರಾಗಬೇಕಾದ ಪವಿತ್ರ ಸಂದರ್ಭವೇ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ

ಸ್ವಾಮಿ ವಿವೇಕಾನಂದರ ಸ್ಫೂರ್ತಿದತ್ತವಾದ ನುಡಿಗಳನ್ನು ಕಂಡಾಗ ಅವರೆಷ್ಟು ಭರವಸೆಯನ್ನು ನಮ್ಮ ದೇಶದ ಯುವ ಜನಾಂಗದ ಮೇಲೆ ಹೊಂದಿದ್ದರು ಎಂಬುದು ಅರಿವಾಗುತ್ತದೆ.
– ಸ್ವಾಮಿ ಜಪಾನಂದ ರವರ ಮಾತಿನಲ್ಲಿ ಹೇಳುದಾದರೆ

.ನನ್ನ ಭರವಸೆಯೆಲ್ಲ ಇಂದಿನ ಯುವಪೀಳಿಗೆಯ ಮೇಲೆ ನಿಂತಿದೆ. ಯುವಜನರನ್ನು ಒಂದುಗೂಡಿಸಿ ಸಂಘಬದ್ಧರಾಗಿ ದುಡಿಯುವಂತೆ ಮಾಡಲು ನಾನು ಜನ್ಮತಾಳಿದ್ದೇನೆ. ಅವರು ಕೆಚ್ಚೆದೆಯ ಸಿಂಹಗಳಂತೆ ಇಡೀ ಯೋಜನೆಯನ್ನು ಕಾರ್ಯಗತಗೊಳಿಸುವರು. ಪ್ರತಿಯೊಂದು ನಗರದಿಂದಲೂ ನೂರಾರು ಯುವಕರು ನನ್ನೊಡನೆ ಬರಲು ಸಿದ್ಧರಿದ್ದಾರೆ. ಇಂಥವರನ್ನು ತಡೆಯಲಸಾಧ್ಯವಾದ ಅಲೆಗಳಂತೆ ಭಾರತದ ಮೇಲೆ ಹರಿಯಿಸಿ ಅತ್ಯಂತ ದೀನ ಹೀನ ಸ್ಥಿತಿಯಲ್ಲಿರುವ ಜನರ ಮನೆಬಾಗಿಲುಗಳಿಗೆ ಭರವಸೆ, ಸಾಂತ್ವನಗಳನ್ನು, ನೀತಿ, ಧರ್ಮ, ವಿದ್ಯೆ ಇವುಗಳನ್ನು ತಲುಪಿಸುವಂತೆ ಮಾಡಬೇಕು. ಇದನ್ನು ಮಾಡಿಯೇ ಮಾಡುತ್ತೇನೆ…… ಎನ್ನುತ್ತಾರೆ ಸ್ವಾಮಿ ವಿವೇಕಾನಂದರು.

ನಿಜವಾದ ಶಿಕ್ಷಣವಲ್ಲ :-

ನಾವಿಂದು ಯುವಜನಾಂಗಕ್ಕೆ ನೀಡುತ್ತಿರುವ ಶಿಕ್ಷ ಣ ನಿಜವಾದ ಅರ್ಥದಲ್ಲಿ ಶಿಕ್ಷ ಣವೇ ಅಲ್ಲ! ನಿಜವಾದ ವಿದ್ಯಾಭ್ಯಾಸವೇ ಅಲ್ಲ, ಬದಲಾಗಿ ಕೇವಲ ಹೊಟ್ಟೆಪಾಡಿಗೆ ಹಾಗೂ ಸ್ವಾರ್ಥ ಜೀವನಕ್ಕೆ ಸೀಮಿತವಾಗಿರುವ ವಿದ್ಯಾಭ್ಯಾಸ ಎನ್ನಬಹುದು.

ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ನಿಜವಾದ ವಿದ್ಯೆ ಒಬ್ಬನನ್ನು ಸ್ವಾವಲಂಬಿಯಾಗಿ ಮಾಡಬೇಕು. ನಿಮಗೆ ಶಾಲೆ ಕಾಲೇಜುಗಳಲ್ಲಿ ದೊರೆಯುತ್ತಿರುವ ವಿದ್ಯೆಯಿಂದ ಅಜೀರ್ಣ ರೋಗಗ್ರಸ್ಥರ ಗುಂಪಿಗೆ ಸೇರಿರುವಿರಿ. ನೀವು ಕೇವಲ ಯಂತ್ರದಂತೆ ಕೆಲಸ ಮಾಡುತ್ತಾ ಶುದ್ಧ ಸೋಮಾರಿಗಳಾಗುವಿರಿ? (ವಿದ್ಯಾಭ್ಯಾಸ-ಸ್ವಾಮಿ ವಿವೇಕಾನಂದ). ಎಂತಹ ಋುಷಿವಾಕ್ಯಗಳಿವು. ಸಪ್ತಋುಷಿಗಳಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರು ನೂರಾ ಇಪ್ಪತ್ತೈದು ವರುಷಗಳ ಹಿಂದೆಯೇ ಇಂದಿನ ಸ್ಥಿತಿಯನ್ನು ಊಹಿಸಿರುವಂತಿದೆ. ಇಂದು ನಾವು ಕಾಣುತ್ತಿರುವ ಯುವ ಜನಾಂಗದ ಒಂದು ಸ್ಪಷ್ಟ ಚಿತ್ರಣ ಸ್ವಾಮಿ ವಿವೇಕಾನಂದರು ನೀಡಿದ್ದಾರೆ. ಈ ಯುವಕರಲ್ಲಿ ದೇಶಾಭಿಮಾನ, ಸ್ವಾಭಿಮಾನ, ಪರೋಪಕಾರ, ಸಂಸ್ಕೃತಿ, ಜೀವನ ಮೌಲ್ಯಗಳ ಪರಿಚಯವೇ ಇಲ್ಲ ಎಂದೆನಿಸುತ್ತದೆ. ಈ ಅಂಶಕ್ಕೆ ಪೂರಕವೆಂಬಂತೆ ದಿನ ನಿತ್ಯ ನಾವು ಕಾಣುವ, ಅನುಭವಿಸುವ. ಘಟನೆಗಳೇ ಸಾಕ್ಷಿ.

ಸ್ವಾಮಿ ವಿವೇಕಾನಂದರ ಪ್ರಕಾರ ‘ನಿಜವಾದ ವಿದ್ಯೆ ಎಂದರೆ ಸರ್ವರಲ್ಲಿಯೂ ಅಡಗಿರುವ ಆ ಚೈತನ್ಯವನ್ನು ಅರಿತು ಇಡೀ ವಿಶ್ವವೇ ನಮ್ಮದು’ ಎಂಬ ಉದಾತ್ತ ಭಾವನೆಯಿಂದ ‘ವಿಶ್ವಮಾನವ ತತ್ತ್ವ’ವನ್ನು ಅಳವಡಿಸಿಕೊಂಡು ಬಾಳುವುದಾಗಿದೆ’.
ಜೀವನ ವಿಕಾಸಕ್ಕೆ ಸಹಾಯ ಮಾಡುವ ಪುರುಷ ಸಿಂಹರನ್ನು ಮಾಡುವ, ಶುದ್ಧ ಚಾರಿತ್ರ್ಯ ಸಂಪನ್ನರನ್ನಾಗಿ ಮಾಡುವ, ಶುದ್ಧ ಚಾರಿತ್ರ್ಯ ಸಂಪನ್ನರನ್ನಾಗಿ ಮಾಡುವ ಭಾವಗಳನ್ನು ರಕ್ತಗತ ಮಾಡಿಕೊಳ್ಳುವಂತಹ ಶಿಕ್ಷ ಣವಿರಬೇಕು’ (ವಿದ್ಯಾಭ್ಯಾಸ – ಸ್ವಾಮಿ ವಿವೇಕಾನಂದ) ಎಂತಹ ನುಡಿಗಳಿವು. ಈ ತೆರನಾದ ಶಿಕ್ಷ ಣವನ್ನು ನಮ್ಮ ಯುವ ಜನಾಂಗ ಪಡೆಯುತ್ತಿದೆಯೇ? ಯೋಚಿಸಿ ನೋಡಿ. ಸ್ವಾಮಿ ವಿವೇಕಾನಂದರು ಮತ್ತೊಂದೆಡೆ ನುಡಿದಂತೆ ನಾವು ‘ಸಿಂಹಸದೃಶರನ್ನಾಗಿಸಲು ಪ್ರಯತ್ನಿಸಿ ವಿಫಲರಾಗಿ ನರಿಯನ್ನಾಗಿಸುತ್ತಿದ್ದೇವೆ’, ನಿಜ! ಈ ಮಾತು ಸತ್ಯ. ಆದುದರಿಂದ ಯುವ ಜನಾಂಗ ಮೊದಲು ಸರಿಯಾದ ಶಿಕ್ಷ ಣವನ್ನು ಪಡೆಯಬೇಕು. ವಿದ್ಯಾಭ್ಯಾಸದ ಬಗ್ಗೆ ಸ್ವಾಮಿ ವಿವೇಕಾನಂದರ ಈ ನುಡಿಗಳು ಅತ್ಯಂತ ಸ್ಪಷ್ಟವಾಗಿದೆ. ಚಾರಿತ್ರ್ಯ ಶುದ್ಧಿಗೆ ಸಹಾಯ ಮಾಡದ, ಪರೋಪಕಾರ ಬುದ್ಧಿಯನ್ನು ಹುಟ್ಟಿಸದ, ಸಿಂಹಸದೃಶವಾದ ಧೈರ್ಯವನ್ನು ನೀಡದ ವಿದ್ಯಾಭ್ಯಾಸದಿಂದ ಪ್ರಯೋಜನವೇನು? ನಾವಿಂದು ಕಾಣುತ್ತಿರುವ ಯುವ ಜನಾಂಗಕ್ಕೆ ದೇಶ ಭಕ್ತಿ, ಮಾತೃಭೂಮಿ ಎಂಬಂತಹ ವಿಚಾರದ ತಿಳಿವೇ ಇಲ್ಲದಂತಾಗಿದೆ.

ಶ್ರೇಷ್ಠತಮ ಲಾಂಛನ – –
‘ಭಾರತದ ಮೇಲೆ ಸ್ವಾಮಿ ವಿವೇಕಾನಂದರಿಗಿದ್ದ ಅನುರಾಗ ಅತ್ಯಪಾರ. ಅವರ ಎದೆಬಡಿತದಲ್ಲಿ ಭಾರತ ಕೇಳಿ ಬರುತ್ತಿತ್ತು. ಅವರ ಧಮನಿ ಧಮನಿಗಳಲ್ಲಿ ಭಾರತ ಮಿಡಿಯುತ್ತಿತ್ತು. ಅವರ ಕನಸು ನನಸುಗಳೆಲ್ಲೆಲ್ಲಾ ಭಾರತವೇ ತುಂಬಿತ್ತು. ಅಷ್ಟೇ ಅಲ್ಲ, ಸ್ವತಃ ಅವರೇ ಭಾರತವಾಗಿ ಬಿಟ್ಟಿದ್ದರು. ಭಾರತದ ಸಾಕಾರ ಮೂರ್ತಿಯೇ ಅವರಾಗಿದ್ದರು. ಭಾರತಾಂಬೆಯ ಆಧ್ಯಾತ್ಮಿಕತೆ, ಪಾವಿತ್ರ್ಯತೆ, ಜ್ಞಾನ, ಶಕ್ತಿ ಮತ್ತು ಧ್ಯೇಯಗಳ ಶ್ರೇಷ್ಠತಮ ಲಾಂಛನವಾಗಿದ್ದರು ಅವರು. ಅವರು ಭಾರತವೇ ಆಗಿದ್ದರು’ ಎನ್ನುತ್ತಾರೆ ಸೋದರಿ ನಿವೇದಿತಾ.

ಯುವ ಜನಾಂಗ ಮತ್ತು ದೇಶಪ್ರೇಮ: –

ಯುವ ಜನಾಂಗ ಈ ಅಮೃತವಾಣಿಯನ್ನು ಆಲಿಸಿಯಾದರೂ ತಮ್ಮ ದೇಶಪ್ರೇಮ, ದೇಶಭಕ್ತಿಯನ್ನು ವೃದ್ಧಿಪಡಿಸಿಕೊಂಡು ದೇಶೋದ್ಧಾರಕ್ಕೆ ಕಂಕಣಬದ್ಧರಾಗಬೇಕಾದ ಪವಿತ್ರ ಸಂದರ್ಭವೇ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ. ಸ್ವಾಮಿ ವಿವೇಕಾನಂದರು ಈ ನಿಟ್ಟಿನಲ್ಲಿ ಯುವ ಜನತೆಗೆ ತಿಳಿಸಿದ ಸಿಂಹವಾಣಿ ಹೀಗಿದೆ; ‘ನಮಗೆ ಬೇಕಾಗಿರುವುದು ಎಲ್ಲವನ್ನೂ ತ್ಯಾಗ ಮಾಡಿ ದೇಶಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸುವಂತಹ ಕೆಲವು ಮಂದಿ ಯುವಕರು…’ ಎಂತಹ ಭರವಸೆಯ ನುಡಿಗಳಿವು. ಆದರೆ ದುರದೃಷ್ಟವಶಾತ್‌ ಈ ತೆರನಾದ ಯುವಶಕ್ತಿಯನ್ನು ನಾವು ಕಾಣುವುದು ವಿರಳ. ಸ್ವಾಮಿ ವಿವೇಕಾನಂದರು ದೇಶದ ಯುವ ಜನತೆಯ ಮೇಲೆ ಅಪಾರ ವಿಶ್ವಾಸವಿಟ್ಟಿದ್ದರು. ಆದರೆ ಆ ವಿಶ್ವಾಸವೆಲ್ಲಾ ಹುಸಿಯಾದಂತಿದೆ. ಬನ್ನಿ! ಭಾರತೀಯ ಯುವ ಜನತೆ, ಟೊಂಕಕಟ್ಟಿ ನವ ಭಾರತದ ನಿರ್ಮಾಣದ ಹಾದಿಯಲ್ಲಿ ಸಾಗೋಣ, ಈ ದೇಶವೇ ನಮ್ಮ ದೈವವಾಗಿರಲಿ. ಈ ದೇಶಕ್ಕೆ ನಾವು ಏನು ಬೇಕಾದರೂ ತ್ಯಜಿಸೋಣ! ಭಾರತಾಂಬೆಯನ್ನು ಸದೃಢಗೊಳಿಸೋಣ, ಇದೇ ನಮ್ಮ ಉದ್ದೇಶವಾಗಿರಲಿ, ದೇಶವಿರುವುದು ಯುವಕರ ಶಕ್ತಿಯಿಂದ ಎಂಬುದನ್ನು ಮರೆಯದಿರಿ. ನಮ್ಮ ಉದ್ದೇಶ ಸದುದ್ದೇಶವಾಗಿರಲಿ.
ಮಾಹಿತಿ ಕೃಪೆ :- ಸ್ವಾಮಿ ಜಪಾನಂದ ರ ಕೃತಿ

ರಾಘವೇಂದ್ರ ಪ್ರಭು,ಕವಾ೯ಲು
ಯುವ ಲೇಖಕ

 
 
 
 
 
 
 
 
 
 
 

Leave a Reply