ಸಾಂಕ್ರಾಮಿಕ ರೋಗಗಳು ತಲೆದೋರಿದಾಗ ರೋಗದ ಎದುರು ಗೆಲ್ಲುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವ~ಪ್ರೀತಿ ಸನಿಲ್, ಕುತ್ಪಾಡಿ, ಉಡುಪಿ

ಮಾರ್ಗದರ್ಶನ ನೀಡುವವರು ಇಲ್ಲದಿದ್ದರೆ ಏನಂತೆ? ಹೊಸ ದಾರಿಯನ್ನು ಹುಡುಕುತ್ತಾ ಧೈರ್ಯದಿಂದ  ಮುನ್ನುಗ್ಗು​, ದಾರಿ ತಾನಾಗೇ ಹುಟ್ಟಿಕೊಳ್ಳುತ್ತದೆ.. ಸ್ವಾಮಿ ವಿವೇಕಾನಂದರ ಅರ್ಥಪೂರ್ಣ ಸಾಲುಗಳಿವು.


ಕಷ್ಟಗಳು ಮನುಷ್ಯನಿಗೆ ಬಾರದೆ ಮರಕ್ಕೆ ಬರುತ್ತದೆಯೇ ಇವು ನಮ್ಮ ಹಿರಿಯರಿಂದ ಕೇಳಿ ಬರುತ್ತಿದ್ದ  ಮಾತುಗಳು.​ ​ಅದೇ ಸತ್ಯ.​ ಬರುವ ಕಷ್ಟಗಳಿಗೆ ಮುಖಮಾಡಿ ಜೀವಿಸುವುದನ್ನು ಕಲಿತುಕೊಳ್ಳಿ​. ​ ಆಗ ಉತ್ಸಾಹ ಹೆಚ್ಚಿ ಆತ್ಮ ವಿಶ್ವಾಸ ಮೂಡುತ್ತದೆ. ಅದೆ ಕಷ್ಟಗಳಿಗೆ ಬೆನ್ನು ಮಾಡಿ ಓಡಿದರೆ ಕಿನ್ನತೆ​,  ಅನಾರೋಗ್ಯ ತಲೆಯೆತ್ತಿ ಆತ್ಮಹತ್ಯೆ ಅಂತಹ ಆಲೋಚನೆ ಬರುವ ಸಾಧ್ಯತೆ ಬಹಳ ಹೆಚ್ಚು.
 
ಅದನ್ನು ಅರಿತುಕೊಂಡು  ಜೀವನ ನಡೆಸುವುದು ಬಹಳ ಮುಖ್ಯ. ಪ್ರಸ್ತುತ ಸ್ಥಿತಿಯ ಬಗ್ಗೆ ಮಾತನಾಡುವುದಾದರೆ ಮಹಾಮಾರಿ ರೋಗ ಬಂತೆಂದು ತಲೆ ಮೇಲೆ ಬಂಡೆ ಬಿದ್ದಂತೆ ಕೂತರೆ ಏನು ಪ್ರಯೋಜನ​. ​ ಒಂದಷ್ಟು ನ್ಯೂಸ್ ಹೆಡ್ಲೈನ್ಸ್ ಗಳು​,​ ವಾಟ್ಸಾಪ್ ಸ್ಟೇಟಸ್ಗಳು​, ​ ವಿಡಿಯೋಗಳು​,​ ರುದ್ರಭೂಮಿ ಎದುರಿಗೆ ಸಾಲು ಹೆಚ್ಚಾದ ಸಾವಿನ ಪ್ರಮಾಣ​,​ ತಲೆಯನ್ನು ಛಿದ್ರ ಮಾಡಿ ಹಾಕುವುದರಲ್ಲಿ ಎಳ್ಳಷ್ಟೂ ಸಂಶಯ ಇಲ್ಲ.

ರೋಗ( ಮಾರಿ ) ಊರು ಪ್ರವೇಶ ಮಾಡಿ ಆಗಿದೆ​. ​ ಇನ್ನು ಉಳಿದಿರುವ ಒಂದೇ ಉಪಾಯ ಅದನ್ನು ಜಾಣ್ಮೆ​ ​ಹಾಗು  ಧೈರ್ಯದಿಂದ ಎದುರಿಸುವುದು.​  ಸಾಂಕ್ರಾಮಿಕ ರೋಗಗಳು ತಲೆದೋರಿದಾಗ ರೋಗದ ಎದುರು ಗೆಲ್ಲುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವ​. ​ ರೋಗದ ನಿರ್ಮೂಲನೆ​ ಹಾಗು ತಡೆಗಟ್ಟುವ ಮಾರ್ಗೋಪಾಯಗಳು ಕಂಡು ಕೊಳ್ಳೋಣ​. ​ ಜೊತೆಗೆ ಅಲ್ಲಿ ರೋಗಿಯ ವಿರುದ್ಧ ಮಾನವೀಯತೆ ಮರೆತು ಹೋಗದಿರಲಿ.

ರೋಗದ ಸಂದರ್ಭ ಮನಸುಗಳ ನಡುವೆ ಭಾವನೆಗಳ ನಡುವೆ ಅಂತರ / ಬೇದ ಬೇಕಾಗಿಲ್ಲ​. ​ ದೇಹಗಳ ನಡುವೆ ಅಂತರವಿಡೋಣ​. ​ ಅತಿ ಆತಂಕ ಬೇಡ ​. ​ಇಲ್ಲಿ ಊರಿಗೆ ಬಂದ ಮಾರಿ ಮನೆಗೆ ಬರದ ಹಾಗೆ ನೋಡಿಕೊಳ್ಳುವ ಅತಿ ಮಹತ್ತರ ಜವಾಬ್ದಾರಿ ನಮ್ಮ ನಿಮ್ಮೆಲ್ಲರದು.​ ವಿದ್ಯಾವಂತರು​, ಅವಿದ್ಯಾವಂತರು ಎಂಬ ಬೇಧ ಇಲ್ಲಿ ಇಲ್ಲ​. ​ ಎಲ್ಲರೂ ಸಮಾನ​ ​ಮನಸ್ಕ ರಾಗಿ ಒಳಗೂ-ಹೊರಗೂ ಇಲ್ಲಿ ಹೋರಾಟ ಮಾಡಬೇಕಾಗಿದೆ.​ 
 
ಅದಕ್ಕೆ ಬೇಕಾದ ತಯಾರಿ​,​ ನೈರ್ಮಲ್ಯ ಆಹಾರ​ ​ಕ್ರಮ​, ​ ಶುಚಿತ್ವ​,​ ಮಾಸ್ಕ್ ಬಳಕೆ ಇದರ ಜೊತೆ ಮುಖ್ಯವಾಗಿ ಆತ್ಮವಿಶ್ವಾಸ ಬೆಳೆಸಿಕೊಳ್ಳುವ ನಾನು ಮತ್ತು ನನ್ನವರು​,​ ನನ್ನ ಊರು​,​ ದೇಶ ರೋಗ ಮುಕ್ತವಾಗುವಲ್ಲಿ ನಮ್ಮದೇನು ಪಾತ್ರ ಎಂದು ಮನವರಿಕೆ ಮಾಡಿಕೊಳ್ಳೋಣ​. ​ ಸಾಂಕ್ರಾಮಿಕ ರೋಗ ಯಾವುದೇ ಇರಲಿ​. ​ ಮನಸು ಯಾವ ರೋಗಕ್ಕೂ ಶರಣಾಗದೆ​,​ ಹೋರಾಡುವಂತೆ ಸಜ್ಜುಗೊಳಿಸುವ​. ​ ರೋಗದ ಗಂಭೀರತೆಯ ಅರಿವಿನ ಜೊತೆಗೆ ದಿಟ್ಟ ಹೆಜ್ಜೆ ಹಾಕೋಣ.
 
ರೋಗ ಬಂತೆಂದರೆ ಕುಗ್ಗದೆ ಸರಿಯಾದ ಆರೋಗ್ಯ ಉಪಚಾರ ಪಡೆದು ಮತ್ತೊಬ್ಬರಿಗೆ ಸೋಂಕು ಹರಡದಂತೆ ತಡೆಯಲು ಆದಷ್ಟು ಪ್ರಯತ್ನ ಮಾಡೋಣ.​  ಮರಣದ ಭಯ ಬೇಡ​. ​ ಸೋಂಕು ಬಂದೆ ಮರಣ ಹೊಂದ ಬೇಕಿಲ್ಲ​. ​ ಜಾರಿ ಬಿದ್ದು ತಲೆ ಒಡೆದು ಹೋದರು ಮರಣ ಸಂಭವಿಸಬಹುದು.​ ​ನಾಳೆ ಏನು ಎಂಬುವುದು ಯಾರೂ ಬಲ್ಲವರಿಲ್ಲ​.ಪ್ರಶ್ನೆ ಇಡಲು ಜ್ಯೋತಿಷಿಗಳು ಕೂಡ ಇಲ್ಲ​. ​ ಅವರು ಅವರ ಆಯಸ್ಸು ಉಳಿಸಿ ಕೊಳ್ಳಲು ಮೂಲೆ ಸೇರಿಕೊಂಡು ಕುಳಿತುಬಿಟ್ಟಿದ್ದಾರೆ​. 
​​
ನಿಮ್ಮ ಆರೋಗ್ಯ​,​ ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ. ಆರೋಗ್ಯದ ರಕ್ಷಣೆ ​ನಮ್ಮ ಜವಾಬ್ದಾರಿಯೂ ಹೌದು​. ​ ಅದನ್ನು ಕಾಪಾಡಿಕೊಳ್ಳಿ​​ ಅಂತೆ-ಕಂತೆಗಳಿಗೆ ಕಿವಿಗೊಡಬೇಡಿ​. ​ ಸರಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿ ಹೋಗುವಂತೆ ನಡೆದುಕೊಳ್ಳಬೇಡಿ​. ​ ಅದಕ್ಕೆ ಬೆಲೆ ತರಬೇಕಾಗಿ ಬರಬಹುದು ಎಚ್ಚರ.

ಗಾಳಿಗೆ ಆರುವುದೆಂದು ದೇವರಿಗೆ ದೀಪ ಹಚ್ಚಿದೆ ಬಿಡುತ್ತೇವೆಯೇ? ಇಲ್ಲ ತಾನೇ​,​ ಅದೇ ರೀತಿ ವಿಶ್ವಾಸವೆಂಬುದು ದೇವರ ಮೇಲೆ ಮಾತ್ರವಲ್ಲ​,​ ದೇವರೆಂಬ ಈ ನಮ್ಮ ದೇಹ ಹಾಗೂ ಮನಸ್ಸಿನ ಮೇಲೆಯು ಇಡಿ. ಕಷ್ಟದ ಹಿಂದೆ ಸುಖ ಎಂದು ತಿಳಿದಿದೆ​. ​ ಆಪತ್ತು ಬಂದಕೂಡಲೇ ವಿಚಲಿತರಾಗದೆ ಆತ್ಮವಿಶ್ವಾಸದಿಂದ ಎದುರಿಸಿ​. ​  ಧೈರ್ಯ ದಿಂದ ಮನಸ್ಸು ಹೃದಯ ಪರಿಪಕ್ವಗೊಳಿಸಿ​. ​ ಶಾಂತತೆಯಿಂದ ಬಂದದ್ದನ್ನು ಬಂದಹಾಗೆ ಎದುರಿಸಿ ಗೆಲ್ಲೋಣ.ಸರ್ವೇ ಜನಃ ಸುಖಿನೋ ಭವಂತು​. ​
​~ ಪ್ರೀತಿ ಸನಿಲ್, ಕುತ್ಪಾಡಿ, ಉಡುಪಿ​​
 
 
 
 
 
 
 
 
 
 
 

Leave a Reply