ಯುಗಾದಿ ಕವನ-ಭಾಗ್ಯಶ್ರೀ ಕಂಬಳಕಟ್ಟ.

ಮರಳಿ ಬಂದಿದೆ ಮನವ ಬೆಳಗುವ

ಸಂಭ್ರಮದ ಹಬ್ಬ ಯುಗಾದಿ

ಬೇವು ಬೆಲ್ಲವ ಎಲ್ಲರಿಗೂ ಹಂಚುವ
ಹಬ್ಬವ ಆಚರಿಸುವ ಆನಂದದಿ

ಮನದ ಕಹಿಯ ಕಳೆಯುತ
ಸವಿಗನಸನು ಬಿತ್ತುತ
ನವ ಉಡುಗೆಯ ತೊಡುತ
ಹೊಸಬಾಳಿಗೆ ಅಡಿಯಿಡುತ

ತೊಳೆದು ಹೋಗಲಿ ಮನಸಿನ ಕೊಳೆ
ಹರಿಯಲಿ ಬಾಳಲಿ ಸಿಹಿಜೇನ ಹೊಳೆ
ಮರೆಯಾಗಲಿ ಜೀವನದ ಕಹಿಘಟನೆ
ಹೊಮ್ಮಲಿ ಮನದಿ ಮಧುರ ಭಾವನೆ

ಮನದ ಕಹಿನೋವೆಲ್ಲ ಬತ್ತಲಿ
ಆನಂದದ ಕಾರಂಜಿ ಹೊಮ್ಮಲಿ
ಬೇವಿನ ಕಹಿಯೆಲ್ಲ ಸಿಹಿಯಾಗಲಿ
ಹೊಸತನ ಪ್ರತಿ ಗಳಿಗೆ ಮೂಡುತಲಿರಲಿ.

 

 
 
 
 
 
 
 
 
 

Leave a Reply