ಓದುಗರ ಮನದಾಳದ ಮಾತು ~ ತಾರಾ ಉಮೇಶ್ ಆಚಾರ್ಯ

“ಕರಾವಳಿ ಎಕ್ಸ್ ಪ್ರೆಸ್”, ಹೆಸರಿಗೆ ತಕ್ಕಂತೆಯೇ ತಡೆಯಿಲ್ಲದೆ ಮುನ್ನುಗ್ಗಿ ಸಾಗುತಿರುವ, ಕರಾವಳಿಯ ಜನತೆಯ ಅತ್ಯಂತ ಅಚ್ಚುಮೆಚ್ಚಿನ ಡಿಜಿಟಲ್ ಸುದ್ದಿವಾಹಿನಿ. ಕರ್ನಾಟಕ ಕರಾವಳಿ ಭಾಗದ ಸಾಂಸ್ಕೃತಿಕ, ಸಾಹಿತ್ಯಿಕ, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ, ಕ್ರೀಡಾ ಕ್ಷೇತ್ರದ  ಬಗೆಗಿನ ದಿನನಿತ್ಯದ ಆಗುಹೋಗುಗಳನ್ನು, ಸ ಚಿತ್ರ ಸುದ್ದಿ-ವರದಿಗಳನ್ನು, ವಿಷಯ ನಿಖರತೆ, ವಸ್ತು ವಿಶೇಷತೆಯೊಂದಿಗೆ ಓದುಗರ ಮುಂದೆ ತೆರೆದಿಡುವ, ರಾಜ್ಯ-ಹೊರರಾಜ್ಯ, ದೇಶ-ವಿದೇಶಗಳ ಸ್ವಾರಸ್ಯಕರ ಸುದ್ದಿ, ಘಟನಾವಳಿಗಳನ್ನು ಕ್ಷಿಪ್ರವಾಗಿ ಓದುಗರಿಗೆ ಮುಟ್ಟಿಸುವ ಮುಖಾಂತರ ಕರಾವಳಿ ಎಕ್ಸ್ ಪ್ರೆಸ್ ಇಂದು ನಾಡಿದಾದ್ಯಂತ ಜನಮಾನಸದ ಪ್ರೀತಿ ವಿಶ್ವಾಸ, ಅಭಿಮಾನವನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ. 
ಸುದ್ದಿ,ವ ರದಿಯ ಜೊತೆ ಜೊತೆಗೆ  ವಿಶೇಷವಾಗಿ ನಮ್ಮಂಥಹ ಗೃಹಿಣಿಯರಲ್ಲಿ ಬರಹ ಆಸಕ್ತಿಯನ್ನು ಪ್ರೋತ್ಸಾಹಿ ಸುವ ನಿಟ್ಟಿನಲ್ಲಿ, ಜಿಲ್ಲೆಯ ಅನೇಕ ಮಹಿಳಾ ಬರಹಗಾರರ ಲೇಖನ, ಕವನ, ಪ್ರಬಂಧ,ಪ್ರ ವಾಸಕಥನಗಳನ್ನು ಪ್ರಕಟಿಸುವ ಮೂಲಕವೂ ಕೂಡ ಅವರ ಪ್ರತಿಭೆಗೆ ಒಂದು ಒಳ್ಳೆಯ ವೇದಿಕೆಯನ್ನು ಒದಗಿಸಿಕೊಟ್ಟಿದೆ ಎಂದು ಹೇಳಲು ತುಂಬಾ ಸಂತೋಷವಾಗುತ್ತದೆ.
ಈಗ ವರುಷ ತುಂಬಿದ ಹರುಷದಲ್ಲಿರುವ, ಜನಾರ್ದನ್ ಕೊಡವೂರು ನೇತೃತ್ವದ ನಾವೆಲ್ಲರೂ ಅತ್ಯಂತ ಇಷ್ಟ ಪಟ್ಟು ಓದುವ “ಕರಾವಳಿ ಎಕ್ಸ್ ಪ್ರೆಸ್” ಮುಂದಿನ ದಿನಗಳಲ್ಲೂ, ಸಂಕ್ಷಿಪ್ತ, ಸಮಗ್ರ ವರದಿ, ಗುಣಮಟ್ಟದ ಬರವಣಿಗೆಯ ಮುಖಾಂತರ ಕರಾವಳಿಯಾದ್ಯಂತ ಇನ್ನಷ್ಟು ಹೆಚ್ಚು ಹೆಚ್ಚು ಓದುಗ ಅಭಿಮಾನಿಗಳನ್ನು ತಲುಪು ವಂತಾಗಲಿ ಎನ್ನುವ ಹಾರೈಕೆಯೊಂದಿಗೆ,ವ ರ್ಷಾಚರಣೆಯ ಸಂಭ್ರಮದಲ್ಲಿರುವ ಕರಾವಳಿ ಎಕ್ಸ್ ಪ್ರೆಸ್ ಗೆ ಶುಭಕೋರುವ…
ತಾರಾ ಉಮೇಶ್ ಆಚಾರ್ಯ. ಸದಸ್ಯರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ.
 
 
 
 
 
 
 
 
 
 
 

Leave a Reply