​ಉಡುಪಿಯ ಹಾಲಿ ಹಾಗು ಮಾಜಿ ಧುರೀಣರ ಗೋಪ್ರೀತಿ..

ಒಬ್ಬರು ಜನಮನ್ನಣೆಗಳಿಸಿದ ಮಾಜಿ ಸಚಿವ….

ಇನ್ನೊಬ್ಬರು ಜನಾನುರಾಗಿಯಾಗಿ ಮುಂದುವರೆಯುತ್ತಿರುವ ಹಾಲಿ ಶಾಸಕ…

ಇಬ್ವರೂ ನಡೆಸಿಕೊಂಡು ಬಂದ ಪಕ್ಷಗಳು ಬೇರೆ ಬೇರೆ…
ಇಬ್ಬರೂ ಒಪ್ಪಿ ಬಂದ ತತ್ವಗಳು ಬೇರೆ ಬೇರೆ..

ಒಂದೊಮ್ಮೆ ಒಬ್ಬರನ್ನೊಬ್ಬರು ಹೊಗಳುವ ಮನ…
ಇನ್ನೊಮ್ಮೆ ಬೇರೊಬ್ಬರಲ್ಲಿರುವ ತಪ್ಪನ್ನು ಹುಡುಕಿ ಸರಿಪಡಿಸಿಕೊಳ್ಳುವ ಗುಣ…

ಒಬ್ಬರಿಗೆ ಮನೆಯೇ ಗೋಮಾಳ …
ಇನ್ನೊಬ್ಬರಿಗೆ ಗೋ ಆರಾಧನೆಯೇ ಜೀವಾಳ …

ರಾಜಕೀಯದ ವೇದಿಕೆಯ ಹತ್ತಿದರೋ ಪರಸ್ಪರ ದೋಷಾರೋಪಣೆ…
ವೇದಿಕೆ ಇಳಿದರೋ ಪರಸ್ಪರ ಹಸ್ತ ಲಾಘವದೊಂದಿಗೆ ಆತ್ಮೀಯ ಸಂಭಾಷಣೆ…

ಸಹಪಾಠಿಗಳೂ ಹೌದು.. ವಿರೋಧ ಮನಸ್ಕರೂ ಹೌದು…
ಆದರೂ ಇಬ್ಬರ ಜುಗಲ್ಬಂದಿ ಗೋ ಪ್ರೀತಿ ಮಾತ್ರ ಅನುಕರಣೀಯ ..ಇವರಿಬ್ಬರು ನಡೆಸುತ್ತಿರುವ ಗೋಸೇವೆ ಆದರಣೀಯ….

ಮುಕ್ಕೋಟಿ ದೇವತೆಗಳ ಆವಾಸಸ್ಥಾನ .. ಹಿಂದೂಳ ಪವಿತ್ರ ಪೂಜನೀಯ ಗೋಮಾತೆಯ ಅನುಗ್ರಹ ಸರ್ವರಿಗಿರಲಿ ಎಂಬ ಆಶಯದೊಂದಿಗೆ ಗೋಪೂಜಾ ಹಬ್ಬದ ಶುಭಾಶಯಗಳು..
ಪೂರ್ಣಿಮಾ ಜನಾರ್ದನ್ ಕೊಡವೂರು.

       
 
 
 
 
 
 
 
 
 
 
 

Leave a Reply