ಜನತೆ ಜನಾರ್ದನರ ಕರಾವಳಿಎಕ್ಸಪ್ರೆಸಗೆ ಒಂದುವರ್ಷ~ ಪಿ.ಲಾತವ್ಯ ಆಚಾರ್ಯ ಉಡುಪಿ.

ಜನತೆ ಮತ್ತು ಜನಾರ್ದನರ ಕುರಿತು ಪ್ರಾಮಾಣಿಕ ಬರಹಗಳನ್ನು ಪರಿಣಾಮಕಾರಿಯಾಗಿ ರೂಪಿಸುತ್ತಿರುವ ನಮ್ಮೆಲ್ಲರ ಪ್ರಿಯ ಸಾಮಾಜಿಕ ಜಾಲತಾಣ ಕರಾವಳಿ ಎಕ್ಸಪ್ರೆಸ್ಸಗೆ ಇದೀಗ ಒಂದು ವರ್ಷ. ಆತ್ಮೀಯ ಗೆಳೆಯರಾದ ಮಾನ್ಯ ಜನಾರ್ದನ ಕೊಡವೂರು ಅವರ ಅಹರ್ನಿಶಿ ಪರಿಶ್ರಮದಿಂದ ಮೂಡಿಬಂದ ಈ ಜಾಲತಾಣವು ಜನ್ನಣ್ಣನಂತೆಯೇ ಸೃಜನಶೀಲತೆ ಹೊಂದಿದೆ.
ಈ ಜಾಲತಾಣ ಕೇವಲ ದೈನಂದಿನ ರಾಜಕೀಯ ಸಾಮಾಜಿಕ ಸುದ್ದಿಗಳಿಗೆ ಮಾತ್ರ ಸೀಮಿತವಾಗದೆ ಅನೇಕ ಆಕರ್ಷಕ ವೈವಿಧ್ಯತೆಯನ್ನು ಬಗಲಿಗೇರಿಸಿಕೊಂಡಿತು. ಬಾಲಕರಿಂದ ವೃದ್ಧರವರೆಗೂ ಮನಸೆಳೆಯುವ ವಿನೂತನ ವಿಷಯಗಳನ್ನು ಪ್ರಕಟಿಸುವುದರ ಮೂಲಕ ಜಾಲತಾಣವು ನೋಡುಗರಿಗೆ ಹೊಸ ಝಲಕನ್ನು ಸೃಷ್ಟಿಸುತ್ತಿದೆ.

ಮೌಲ್ಯಾಧಾರಿತ ಸಂದೇಶ, ಕೃಷ್ಣಾಲಂಕಾರ, ಛಾಯಾಚಿತ್ರ ಸ್ಪರ್ಧೆ, ಬಹುವಿಧದ ಸೇವೆಯಲ್ಲಿ ನಿವೃತ್ತರಾದ ಮಹನೀಯರ ಸಾಧನೆಗಳು ಜೊತೆಗೆ ನಮ್ಮಂತಹ ಅನೇಕ ಬರಹಗಾರರಿಗೂ ವೇದಿಕೆಯನ್ನು ಕಲ್ಪಿಸುತ್ತಾ ಹತ್ತು ಹಲವು ಸಮಾಜಮುಖೀ ಚಿಂತನೆ ಹಾಗೂ ಉಪಯುಕ್ತ ಮಾಹಿತಿಯೊಂದಿಗೆ ಹಚ್ಚಹಸಿರ ಹೊಸತನದೊಂದಿಗೆ ಎರಡನೇ ವರ್ಷಕ್ಕೆ ಕರಾವಳಿ ಎಕ್ಸಪ್ರೆಸ್ ಪಾದಾರ್ಪಣೆಗೈಯುತ್ತಿದೆ.

ಇದರ ಜೊತೆಗೆನೇ ಮಾನ್ಯ ಜನ್ನಣ್ಣನವರದು ಬಹುಮುಖದ ವ್ಯಕ್ತಿತ್ವ. ಸ್ವತಃ ಪ್ರಸಿದ್ದ ಹಿರಿಯ ಛಾಯಾಗ್ರಾಹಕರು, ಮತ್ತು ಅನೇಕ ಪ್ರಶಸ್ತಿಗಳನ್ನು ಫಲಕಗಳನ್ನು ಮುಡಿಗೇರಿಸಿಕೊಂಡ ಸಾಧಕ, ನಾಡಿನ ಹೆಸರಾಂತ ಸಂಘ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಯಲ್ಲಿದ್ದು ನಿರಂತರ ಸಾಮಾಜಿಕ ಸೇವೆಯಲ್ಲೂ ಕೂಡಾ ತೊಡಗಿದ್ದಾರೆ, ಉತ್ತಮ ಬರಹಗಾರರೂ ಕೂಡಾ.

ಮಾನ್ಯರ ಸೇವೆ, ಸಾಧನೆ ಹೀಗೆ ಸಾಗುತ್ತಿರಲಿ. ಕರಾವಳಿ ಎಕ್ಸಪ್ರೆಸ್  ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆಯಲಿ, ಬದುಕು ಬಂಗಾರವಾಗಲಿ, ಅವರ ಹಿರಿತನದಲ್ಲಿ ಸಮಾಜ ಬೆಳಗಲಿ ಎಂದು ಈ ಪರ್ವಕಾಲದಲ್ಲಿ ಶುಭ ಹಾರೈಸುತ್ತೇವೆ.
 
 
 
 
 
 
 
 
 
 
 

Leave a Reply