ಸಲ್ಲುವುದು ಸಿರಿಗಂಧ
ಗೆಲ್ಲುವೆವು ನಾವೆಂಬ
ವಿಶ್ವಾಸ ತುಂಬಾ ಸರಳತೆಯ ಬಿಂಬ
ನೆಲ, ನೀತಿ ನಿಯಮಗಳು
ಆದ್ಯತೆಯೇ ಆಗಿದ್ದು ಮೆಲುದನಿಯ
ಮಾತಿನಲಿ ಬದ್ಧತೆಗೆ ಬದ್ದ
ಸಮಾಜಪರ ಚಿಂತನೆಗೆ ತಾನೆಂದೂ ಸಿದ್ದ
ಸರಳತೆಗೆ ಸಹಿಷ್ಣುತೆಗೆ ತಾನೊಬ್ಬ ವಿಷ್ಣು
ವಿರಳರಲಿ ವಿರಳರು ನಮಗೊಬ್ಬ ಸಹಿಷ್ಣು
ಕೈ ಬಾಯಿ ಮನ ಶುದ್ದ ಮನುಜರೇ ನೀವು
ಸೈ ಎನಿಸಿ ಇಹ ಪರವ ತೊರೆದಿರಿ ತಾವು
ದೇವರುಗಳ ನಾಡೆಂದು ಕರೆವರು ಇಲ್ಲಿ
ದೇವರಂತಹ ನಿಮ್ಮನ್ನು ಕಾಣುವೆವು ಎಲ್ಲಿ
ಗುಡಿಯಿರಲಿ ಗಡಿಯಿರಲಿ ಒಡಲಿರಲಿ ಅಲ್ಲಿ
ನುಡಿಯಿರಲಿ ನಡೆಯಿರಲಿ ನಿಮ್ಮ ನೆನಪಲ್ಲಿ
ಮಾಸದ ನೆನಪಿನ ಮಹನೀಯ
ಕುಕ್ಕೆ
🙏🙏🙏