ವಿದ್ಯಾ ಸರಸ್ವತಿಯವರಿಗೆ ಮಹಿಳಾ ವಾರಿಯರ್ ಪುರಸ್ಕಾರ

ಆರ್ ವಿ ದೇವರಾಜ್ ಸೇವಾ ಪ್ರತಿಷ್ಠಾನ ®, ಸ್ವರ್ಣ ಭಾರತ್ ಫೌಂಡೇಶನ್ ಹಾಗೂ ತ್ರಿಶೂಲ ಟ್ರಸ್ಟ್® ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಕೊಡಲ್ಪಟ್ಟ ಮಹಿಳಾ ವಾರಿಯರ್ ಪ್ರಶಸ್ತಿ 2021-22 ಉಡುಪಿಯ ಶ್ರೀಮತಿ ವಿದ್ಯಾ ಸರಸ್ವತಿಯವರು ಪಡೆದಿರುತ್ತಾರೆ. 
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾರಂಭ ನಡೆದಿದ್ದು, ಶ್ರಿಮತಿ ಆರ್.ವಿ ಮಮತಾ ರಾಜ್  ಮತ್ತು  ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರು ಹಾಗೂ ಅಖಿಲ ಭಾರತ ತುಳು ಒಕ್ಕೂಟದ ಸಂಘಟನಾ ಕಾರ್ಯದರ್ಶಿಯಾದ ಶ್ರಿಮತಿ ಕಾಂತಿ ಶೆಟ್ಟಿಯವರ ಮೂಲಕ ಅಭಿನಂದನೆ ನೀಡಲಾಯಿತು. 
ಈ ಕಾಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿರುವ 250 ಮಹಿಳಾ ಸಾಧಕರಿಗೆ ಪ್ರಶಸ್ತಿಯನ್ನು ನೀಡಲಾಗಿದ್ದು ಮಹಿಳೆಯರು ಇನ್ನಷ್ಟು ಸಾಧಿಸಲು ಪ್ರೋತ್ಸಾಹಿಸಲಾಗಿದೆ.
 
 
 
 
 
 
 
 
 
 
 

Leave a Reply