ರಾಜ್ಯ ಮಟ್ಟದ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ವರ್ಷಶ್ರೀ ಅವರು ತೇರ್ಗಡೆ

ರಾಜ್ಯ ಮಟ್ಟದ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉಡುಪಿ, ಕರಂಬಳ್ಳಿಯ ವರ್ಷಶ್ರೀ ಅವರು ತೇರ್ಗಡೆಯಾಗಿದ್ದಾರೆ.

ನಿವ್ರತ್ತ ಶಿಕ್ಷಕರಾದ ದಿವಾಕರ್ ಐತಾಳ್ ಮತ್ತು ನಿವ್ರತ್ತ ಶಿಕ್ಷಕಿಯಾದ ಜಯಲಕ್ಷ್ಮಿ ಅವರ ಪುತ್ರಿ ವರ್ಷಶ್ರೀ, ಗುಂಡಿಬೈಲ್ ಶಾಲೆ, ನಿಟ್ಟೂರು ಫ್ರೌಡ ಶಾಲೆ , ಉಡುಪಿ ಹೆಮ್ಮಕ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ‌ ಶಿಕ್ಷಣ ಪಡೆದು, ಉಡುಪಿಯ ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು 2012ರಲ್ಲಿ ಪಡೆದಿದ್ದಾರೆ.
ಪ್ರಸ್ತುತ ಸರಕಾರಿ ಸಹಾಯಕ ಅಭಿಯತಂರರಾಗಿ ಕುಂದಾಪುರದಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

 
 
 
 
 
 
 
 
 

Leave a Reply