ಉಡುಪಿಯ ಹೆಸರಾಂತ ಸಂಗೀತ ವಿದುಷಿ ಉಷಾ ಹೆಬ್ಬಾರ್ ಅವರಿಗೆ ಎಸ್ ಬ್ಯಾಂಕ್ ವತಿಯಿಂದ ಕಲಾ ರತ್ನ ಬಿರುದು ನೀಡಿ ಗೌರವಿಸಿ, ಅಭಿನಂದಿಸಲಾಗಿದೆ.
ಅಸಂಖ್ಯಾತ ಶಿಷ್ಯ ವರ್ಗವನ್ನು ಹೊಂದಿರುವ ಹೆಬ್ಬಾರ್ ಅವರು, ಸಂಗೀತ ಕ್ಷೇತ್ರದಲ್ಲಿ ತನ್ನನ್ನು ವಿಶೇಷವಾಗಿ ತೊಡಗಿಸಿ ಕೊಂಡಿದ್ದಾರೆ.
ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿರುವ ಉಷಾ ಹೆಬ್ಬಾರ್ ರವರು ತಮ್ಮ ಹಾಡುಗಾರಿಕೆ ಯಿಂದ ಶೋತ್ರುಗಳ ಮನ ಮೆಚ್ಚಿದ ಗಾಯಕಿಯಾಗಿದ್ದಾರೆ.