ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮುಕುಂದ ಕೃಷ್ಣ ಅಂಗ್ಲ ಮಾಧ್ಯಮ ಶಾಲೆ ವತಿಯಿಂದ ನಡೆದ ಉಡುಪಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆ ಅಜ್ಜರಕಾಡು ಇಲ್ಲಿನ 9ನೇ ತರಗತಿಯ ವಿದ್ಯಾರ್ಥಿ ದೃಶಾನ್ 50 ಮೀ ಬ್ಯಾಕ್ ಸ್ಟೋಕ್ನಲ್ಲಿ ಪ್ರಥಮ, 100 ಮೀ ಬಟರ್ ಫ್ಟ್. ಪ್ರಥಮ, 100 ಮೀ ಫ್ರೀಸ್ಟೈಲ್ ದ್ವಿತೀಯ ಸ್ಥಾನ ಪಡೆದು ಚಾಂಪಿಯನ್ ಆಗಿದ್ದಾನೆ. ಈತ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾನೆ. ಈತ ಕಿದಿಯೂರಿನ ಪಿತಾಂಬರ್ನಾಥ ಮತ್ತು ಭಾನುಮತಿ ದಂಪತಿಯ ಪುತ್ರನಾಗಿದ್ದಾನೆ. ಈತನಿಗೆ ಗಂಗಾಧರ್ ಜಿ. ಕಡಕಾರ್ರವರು ತರಬೇತಿಯನ್ನು ನೀಡಿರುತ್ತಾರ.