ಎಸ್. ವಿ.ಟಿ : ಕುಸ್ತಿಯಲ್ಲಿ ಆರು ಮಂದಿ ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆ

ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಛೇರಿ(ಆಡಳಿತ)ಉಡುಪಿ ಇವರು ಶ್ರೀ ವಾಣಿ ಪ್ರೌಢ ಶಾಲೆ ಬ್ರಹ್ಮಾವರ ಇಲ್ಲಿ ಆಯೋಜಿಸಿರುವ ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಆಟೋಟ ಸ್ಪರ್ಧೆ 2022-23 ನೇ ಸಾಲಿನ 14 ವರ್ಷದ ಒಳಗಿನ ಕುಸ್ತಿ ಸ್ಪರ್ಧೆಯಲ್ಲಿ ಎಂಟನೇ ತರಗತಿಯ ಪ್ರೇಕ್ಷಾ, ಅನ್ವಿತಾ, ದೀಕ್ಷಿತಾ, ಶ್ರುತಿ ಪ್ರಥಮ ಸ್ಥಾನ ಹಾಗೂ ಅಂಕಿತಾ ಮತ್ತು ಮಾನ್ಯ ದ್ವಿತೀಯ ಸ್ಥಾನ ಪಡೆದಿರುತ್ತಾರೆ. 17 ವರ್ಷದ ಒಳಗಿನ ಕುಸ್ತಿ ವಿಭಾಗದಲ್ಲಿ 9ನೇ ತರಗತಿಯ ದೀಪ್ತಿ ಮತ್ತು 10 ನೇ ತರಗತಿಯ ಅಂಕಿತಾ ಪ್ರಥಮ ಸ್ಥಾನ ಹಾಗೂ 9ನೇ ತರಗತಿಯ ಸುಶ್ಮಿತಾ ಮತ್ತು 10ನೇ ತರಗತಿಯ ಭಾಗ್ಯಶ್ರೀ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಕಾಲೇಜಿನ ಪ್ರಾಚಾರ್ಯರಾದ ಶ್ರೀ ರಾಮದಾಸ್ ಪ್ರಭು, ಮುಖ್ಯೋಪಾಧ್ಯಾಯರಾದ ಶ್ರೀ ಯೋಗೇಂದ್ರ ನಾಯಕ್, ಪ್ರೌಢ ಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಪ್ರಿಯಾ ಪ್ರಭು ಹಾಗೂ ಪದವಿ ವಿಭಾಗದ ದೈಹಿಕ ಶಿಕ್ಷಣ ನಿರ್ದೇಶಕಿ ಶ್ರೀಮತಿ ಪ್ರಭಾವತಿ ಶೆಟ್ಟಿ ಉಪಸ್ಥಿತರಿದ್ದರು.

ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾದ 8ನೇ ತರಗತಿಯ ಪ್ರೇಕ್ಷಾ,ಅನ್ವಿತಾ, ದೀಕ್ಷಿತಾ, ಶ್ರುತಿ , 9ನೇ ತರಗತಿಯ ದೀಪ್ತಿ, 10 ನೇ ತರಗತಿಯ ಅಂಕಿತಾ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply