​skpa ಸನ್ಮಾನ ಸಂತಸ ತಂದಿದೆ~ಗುಲಾಬಿ ಟೀಚರ್ ​

ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆ ಶಿರಿಬೀಡು ಉಡುಪಿ ಇದರ ನಿವೃತ್ತ ಶಿಕ್ಷಕಿ ಶ್ರೀಮತಿ ಗುಲಾಬಿ ಬಾಯಿ ಇವರನ್ನು skpa ಉಡುಪಿ ವಲಯದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಗುಲಾಬಿ ಟೀಚರ್ ಈ ಸನ್ಮಾನ ತನಗೆ ಸಂತಸ ತಂದಿದೆ.ವಲಯದ ಎಲ್ಲಾ ಸದಸ್ಯರನ್ನು ದೇವರು ಕಾಪಾಡಲಿ ಎಂದು ಆಶೀರ್ವದಿಸಿದರು.
ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಮಾತನಾಡಿ ಗುರುಗಳಿಗೆ ಸಮಾಜದಲ್ಲಿ ಉನ್ನತ ಸ್ಥಾನ ಮಾನವಿದೆ.​ ​ಮಕ್ಕಳನ್ನು ತಿದ್ದಿ ತೀಡಿ ಸತ್ಪ್ರಜೆಗಳನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹು ದೊಡ್ಡದು. ಇದೊಂದು ಅರ್ಥ ಪೂರ್ಣ ಕಾರ್ಯಕ್ರಮ ಎಂದರು.​ ​
ಸಮಾರಂಭದಲ್ಲಿ ಗೌರವಾಧ್ಯಕ್ಷ ಶಿವ ಕೆ ಅಮೀನ್,​ ​ವಲಯಾಧ್ಯಕ್ಷ ಪ್ರಕಾಶ್ ಕೊಡಂಕೂರು,​ ​​ಪ್ರದಾನ  ಕಾರ್ಯದರ್ಶಿ ಸುಕೇಶ್ ಕೆ.ಅಮೀನ್,​ ​ಸುರಭಿ ಸುಧೀರ್ ಶೆಟ್ಟಿ, ರತನ್ ಶೆಟ್ಟಿ, ಜಯಕರ್ ಸುವರ್ಣ,​ ​ಪ್ರವೀಣ್ ಕೊರೆಯಾ,​ ​ಸಂತೋಷ್ ಕೊರಂಗ್ರಪಾಡಿ,​ ​ಚಂದ್ರ ಶೇಖರ್ ಹಿರಿಯಡಕ,​ ​ವಾಮನ್ ಪಡುಕರೆ,​ ​ಮಹೇಶ್ ಸುವರ್ಣ,​ ​ರಾಘವೇಂದ್ರ ಶೇರಿಗಾರ್, ಮಂಜುನಾಥ ದೇವಾಡಿಗ​ ​ಉಪಸ್ಥಿತರಿದ್ದರು.
ಪ್ರಕಾಶ್ ಕೊಡಂಕೂರು ಸ್ವಾಗತಿಸಿದರು. ಸುಕೇಶ್ ಕೆ.ಅಮೀನ್ ವಂದಿಸಿದರು.​ ​ರಾಘವೇಂದ್ರ ಶೇರಿಗಾರ್  ನಿರೂಪಿಸಿದರು.
 
 
 
 
 
 
 
 
 
 
 

Leave a Reply