ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಅವರಿಗೆ ಸೇವಾ ರತ್ನ ಪ್ರಶಸ್ತಿ

ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ಯೂನಿಯನ್ (ರಿ.) ಕಲಬುರ್ಗಿ ವತಿಯಿಂದ ಸೆಪ್ಟೆಂಬರ್ 16 ರಂದು ಜೇವರ್ಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಮಾಜ ಸೇವೆಯನ್ನು ಗುರುತಿಸಿ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ರಾಯಣ್ಣ ಅಭಿಮಾನಿ ಬಳಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರನ್ನು ” ಸೇವಾ ರತ್ನ ಪ್ರಶಸ್ತಿ” ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ,ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ಯೂನಿಯನ್ (ರಿ.) ನ ರಾಜ್ಯ ಮತ್ತು ಜಿಲ್ಲಾ ಅದ್ಯಕ್ಷರು ಪದಾಧಿಕಾರಿಗಳು, ರಂಗಣಗೌಡ ಪಾಟೀಲ್, ಶಿವಾಜಿ ಗುಲ್ಬರ್ಗ, ಶರಣು ತಳಕೆರಿ,ಶರಣು ಅಂಕಲಗಾ, ಮೌನೇಶ್ ಗತ್ತರಗಿ ಮತ್ತು ರಾಯಣ್ಣ ಅಭಿಮಾನಿ ಬಳಗದವರು,ಹಲವಾರು ಸಂಘ ಸಂಸ್ಥೆಯ ಮುಖಂಡರುಗಳು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply