ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ಯೂನಿಯನ್ (ರಿ.) ಕಲಬುರ್ಗಿ ವತಿಯಿಂದ ಸೆಪ್ಟೆಂಬರ್ 16 ರಂದು ಜೇವರ್ಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸಮಾಜ ಸೇವೆಯನ್ನು ಗುರುತಿಸಿ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ರಾಯಣ್ಣ ಅಭಿಮಾನಿ ಬಳಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರನ್ನು ” ಸೇವಾ ರತ್ನ ಪ್ರಶಸ್ತಿ” ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ,ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ಯೂನಿಯನ್ (ರಿ.) ನ ರಾಜ್ಯ ಮತ್ತು ಜಿಲ್ಲಾ ಅದ್ಯಕ್ಷರು ಪದಾಧಿಕಾರಿಗಳು, ರಂಗಣಗೌಡ ಪಾಟೀಲ್, ಶಿವಾಜಿ ಗುಲ್ಬರ್ಗ, ಶರಣು ತಳಕೆರಿ,ಶರಣು ಅಂಕಲಗಾ, ಮೌನೇಶ್ ಗತ್ತರಗಿ ಮತ್ತು ರಾಯಣ್ಣ ಅಭಿಮಾನಿ ಬಳಗದವರು,ಹಲವಾರು ಸಂಘ ಸಂಸ್ಥೆಯ ಮುಖಂಡರುಗಳು ಉಪಸ್ಥಿತರಿದ್ದರು.