ನಾಡೋಜ ಡಾ. ಕೂಡ್ಲು ಕೃಷ್ಣಪ್ರಸಾದ್ ಗೆ ಶ್ರೀರಾಘವಾನುಗ್ರಹ ಪ್ರಶಸ್ತಿ

ಉಡುಪಿ: ಪ್ರಸಾದ್ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆಯ ನಿರ್ದೇಶಕ, ನಾಡು ಕಂಡ ಶ್ರೇಷ್ಟ ನೇತ್ರ ತಜ್ಞ, ಸಾಮಾಜಿಕವಾಗಿ ಕಾರ್ಯೋನ್ಮುಖಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ, ವೈದ್ಯಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿನ ಸೇವೆಗಾಗಿ ನಾಡೋಜ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ನಾಡೋಜ ಡಾ. ಕೂಡ್ಲು ಕೃಷ್ಣಪ್ರಸಾದ್ ಅವರಿಗೆ ಶ್ರೀರಾಘವಾನುಗ್ರಹ ಪ್ರಶಸ್ತಿ ಯನ್ನು ನೀಡಲಾಯಿತು.

ವೈದ್ಯಕೀಯ ಹಾಗೂ ಸಾಮಾಜಿಕ ಕಾರ್ಯಗಳ ಒಲವಿಗಾಗಿ ಮಟ್ಟು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆದ ಶ್ರೀರಾಮ ಸತ್ರದ ಪುಣ್ಯ ಕಾಲದಲ್ಲಿ ಶ್ರೀಪಾದರಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 
 
 
 
 
 
 
 
 
 
 

Leave a Reply