ಶಾಂತಿ‌ಮತೀ ಪ್ರತಿಷ್ಟಾನ ವತಿಯಿಂದ ಸಾಧಕರೆಡೆ ನಮ್ಮ ನಡೆ. 

ನಮ್ಮ ಸಾಧನೆಯ ಬಗ್ಗೆ ನಾವೇ ಅಭಿಮಾನ‌ ಪಟ್ಟರೆ ಸಂತಸವೆನಿಸುತ್ತದೆ. ಆದರೆ ಸಾರ್ಥಕವೆನಿಸುವುದು ಇನ್ನೊಬ್ಬರು ಅಭಿಮಾನ ಪಟ್ಟಾಗ ಮಾತ್ರ ಎಂದು ಪೂರ್ಣಿಮಾ ಜನಾರ್ದನ್ ಅಭಿಪ್ರಾಯ ಪಟ್ಟರು. 
ಅವರು ಶಾಂತಿ‌ಮತೀ ಪ್ರತಿಷ್ಟಾನ ( ರಿ) ಹಂದಾಡಿ, ಬ್ರಹ್ಮಾವರ ಹಮ್ಮಿಕೊಂಡ ಸಾಧಕರೆಡೆ ನಮ್ಮ ನಡೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ,  ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಸುಪ್ತ ಪ್ರತಿಭೆ ಇದ್ದು ಅದಕ್ಕೊಂದು ಸೂಕ್ತ ವೇದಿಕೆ ದೊರೆತಾಗ ಆ ಪ್ರತಿಭೆ ಪ್ರಕಾಶಿಸುತ್ತದೆ ಎಂದರು.
ಶಾಂತಿಮತೀ ಪ್ರತಿಷ್ಟಾನದ  ವಿದ್ವಾನ್ ವಿಜಯ ಮಂಜರವರು ಮಾತನಾಡುತ್ತಾ ಒಂದು ಮನೆ,ಆ ಮನೆಮಂದಿ, ಆ‌ ಮನೆಯ ಸುತ್ತಲಿನ ಜನ, ಸಮುದಾಯ, ಒಂದು ಸಮಾಜ ಇವೆಲ್ಲವನ್ನೂ ಅಚ್ಚುಕಟ್ಟಾಗಿ ತೂಗಿಸಿಕೊಂಡು ಹೋಗುವ  ಸ್ತ್ರೀ ಶಕ್ತಿ ನಿಜಕ್ಕೂ ಅದ್ಭುತ.
ಅಂತಹ ಮಹಿಳಾ ಶಕ್ತಿಯನ್ನು‌ ನಾವು ಗೌರವಿಸಬೇಕು ಎಂದರು. ಉಡುಪ ರತ್ನ ಪ್ರತಿಷ್ಟಾನದ ಸಂಚಾಲಕ ಜನಾರ್ದನ ಕೊಡವೂರು ಸ್ವಾಗತಿಸಿದರು. ಶಾಂತಿ ಮತೀ ಪ್ರತಿಷ್ಟಾನದ ಅಧ್ಯಕ್ಷ ದಯಾನಂದ ವಾರಂಬಳ್ಳಿ ಪ್ರಾಸ್ತಾವಿಕ‌ ಮಾತುಗಳನ್ನಾಡಿದರು. ನಳಿನಿ ಪ್ರದೀಪ್ ,ಯಶೋದಾ ಹೊಳ್ಳ ಶುಭಾಶಂಸನೆ ಮಾಡಿದರು. ಉಮೇಶ್ ಬಾಯರಿ ಧನ್ಯವಾದವಿತ್ತರು.
 
 
 
 
 
 
 
 
 
 
 

Leave a Reply