ಗುರುರಾಜ ಮಾರ್ಪಳ್ಳಿಯವರಿಗೆ ಅಭಿನಂದನೆ

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಮತ್ತು ರೋಟರಿ ಮಣಿಪಾಲ ಇವರ ಆಶ್ರಯದಲ್ಲಿ ಹಿರಿಯ ಸಾಹಿತಿ ,ನಾಟಕಕಾರ, ಕಲಾವಿದ, ನಿರ್ದೇಶಕ, ಕವಿ ಗುರುರಾಜ ಮಾರ್ಪಳ್ಳಿ ಅವರನ್ನು ಐದು ಸಾವಿರ ಗೌರವ ಧನದೊಂದಿಗೆ ಉಡುಪಿ ಕುಂಜಿಬೆಟ್ಟುವಿನಲ್ಲಿರುವ ಸ್ಕೂಲ್ ಬುಕ್ ಕಚೇರಿಯಲ್ಲಿ ಇಂದು ಅಭಿನಂದಿಸಲಾಯಿತು.

ಅಭಿನಂದನಾ ಸ್ವೀಕರಿಸಿ ಮಾತನಾಡುತ್ತಾ ಗುರುರಾಜ ಮಾರ್ಪಳ್ಳಿ ಕಾರಂತದ್ವಯರಾದ ಡಾ| ಕೋಟ ಶಿವರಾಮ ಕಾರಂತ ಮತ್ತು ಬಿ ವಿ ಕಾರಂತ ಅವರ ಜೊತೆಗಿನ ಒಡನಾಟವನ್ನು ನೆನಪಿಸಿ ಕೊಂಡರು.

ಸಮಾರಂಭದಲ್ಲಿ ರೋಟರಿ ಅಧ್ಯಕ್ಷ, ಮನೋರೋಗ ತಜ್ಞ ಡಾ|ವಿರೂಪಾಕ್ಷ ದೇವರಮನೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣಿೈ, ಅಧ್ಯಕ್ಷರಾದ ಪ್ರೊ. ಶಂಕರ್, ಸ್ಕೂಲ್ ಬುಕ್ ಉಡುಪಿಯ ವ್ಯವಸ್ಥಾಪಕ ವೈಕುಂಠ ಪ್ರಭು ಉಪಸ್ಥಿತರಿದ್ದರು. ಕಲಾವಿದೆ ಭಾವನ ಕೆರೆಮಠ ಸ್ವಾಗತಿಸಿದರು, ಸಂಚಾಲಕ ರವಿರಾಜ್ ಎಚ್ .ಪಿ ಪ್ರಾಸ್ತಾವಿಕ ಮಾತನಾಡಿದರು .ಕಲಾವಿದ ವಿವೇಕ್.ಎನ್ ನಿರೂಪಿಸಿದರು. ರಾಜೇಶ್ ಭಟ್ ಪಣಿಯಾಡಿ ಧನ್ಯವಾದ ನೀಡಿದರು.

 
 
 
 
 
 
 
 
 
 
 

Leave a Reply