ಉಡುಪಿ ರಂಗಭೂಮಿಯಿಂದ ಸಾಧಕರಾದ ಮೇಟಿ ಮುದಿಯಪ್ಪ, ಸೋಮನಾಥ ಚಿಟ್ಪಾಡಿಯವರಿಗೆ ಅಭಿನಂದನೆ 

ಜಿಲ್ಲೆಯ ಪ್ರತಿಷ್ಠಿತ ರಂಗ​ಸಂಸ್ಥೆಯಾದ ರಂಗಭೂಮಿ ರಿ.​ ಉಡುಪಿಯು ಮಾರ್ಚ್ ​27ರಂದು ವಿಶ್ವರಂಗಭೂಮಿ​ ದಿನಾಚರಣೆಯನ್ನು ಉಡುಪಿ ಎಂಜಿ​ಎಂ ​ ಕಾಲೇಜಿನ ನೂತನ ರವೀಂದ್ರ​ ​ಮಂಟಪದಲ್ಲಿ ಸಂಜೆ ​6.00ಗಂಟೆಗೆ ಆಚರಿಸಲಿದೆ. 
 
ಆ ಪ್ರಯುಕ್ತ​ ‘ವಿಶ್ವರಂಗಭೂಮಿ ಪ್ರಶಸ್ತಿ ​2020ನ್ನು ಹಿರಿಯ ಪ್ರಸಾಧನ​ ಕಲಾವಿದ ಸೋಮನಾಥ ಚಿಟ್ಪಾಡಿಯವರಿಗೆ ಹಾಗೂ​ ‘ವಿಶ್ವರಂಗಭೂಮಿ ಪ್ರಶಸ್ತಿ​ ​​2021ನ್ನು ಹಿರಿಯ ಸಾಹಿತಿ, ರಂಗ​ ​ಸಂಘಟಕ  ಮೇಟಿ ಮುದಿಯಪ್ಪ ಇವರಿಗೆ ಪ್ರದಾನ​ ಮಾಡಲಾಗುವುದು. 
 
ಸಭಾ ಕಾರ್ಯಕ್ರಮದ ಬಳಿಕ ಕೋಶಿಕಾ ರಿ.​ ಚೇರ್ಕಾಡಿ ಇವರಿಂದ ‘ಕುದುರೆ ಬಂತು ಕುದುರೆ’ ಎಂಬ ನಾಟಕ​ ಪ್ರದರ್ಶನವು ನಡೆಯಲಿದೆ ಎಂದು ರಂಗಭೂಮಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

​​
​​

 
 
 
 
 
 
 
 
 
 
 

Leave a Reply