ಜಿಲ್ಲೆಯ ಪ್ರತಿಷ್ಠಿತ ರಂಗಸಂಸ್ಥೆಯಾದ ರಂಗಭೂಮಿ ರಿ. ಉಡುಪಿಯು ಮಾರ್ಚ್ 27ರಂದು ವಿಶ್ವರಂಗಭೂಮಿ ದಿನಾಚರಣೆಯನ್ನು ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸಂಜೆ 6.00ಗಂಟೆಗೆ ಆಚರಿಸಲಿದೆ.
ಆ ಪ್ರಯುಕ್ತ ‘ವಿಶ್ವರಂಗಭೂಮಿ ಪ್ರಶಸ್ತಿ 2020ನ್ನು ಹಿರಿಯ ಪ್ರಸಾಧನ ಕಲಾವಿದ ಸೋಮನಾಥ ಚಿಟ್ಪಾಡಿಯವರಿಗೆ ಹಾಗೂ ‘ವಿಶ್ವರಂಗಭೂಮಿ ಪ್ರಶಸ್ತಿ 2021ನ್ನು ಹಿರಿಯ ಸಾಹಿತಿ, ರಂಗ ಸಂಘಟಕ ಮೇಟಿ ಮುದಿಯಪ್ಪ ಇವರಿಗೆ ಪ್ರದಾನ ಮಾಡಲಾಗುವುದು.
ಸಭಾ ಕಾರ್ಯಕ್ರಮದ ಬಳಿಕ ಕೋಶಿಕಾ ರಿ. ಚೇರ್ಕಾಡಿ ಇವರಿಂದ ‘ಕುದುರೆ ಬಂತು ಕುದುರೆ’ ಎಂಬ ನಾಟಕ ಪ್ರದರ್ಶನವು ನಡೆಯಲಿದೆ ಎಂದು ರಂಗಭೂಮಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.