ರಜನಿ.ವಿ‌.ಪೈಯವರಿಗೆ “ಅಂಜನಾದ್ರಿ ಸದ್ಭಾವನ” ಪುರಸ್ಕಾರ

ಅಂಜನಾದ್ರಿ ಸಾಂಸ್ಕೃತಿಕ ಉತ್ಸವ ಸಮಿತಿ ವತಿಯಿಂದ 16-04-2022ರ ಶನಿವಾರದಂದು ಗಂಗಾವತಿಯ ಶ್ರೀಮತಿ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ “ಅಂಜನಾದ್ರಿ ಸಾಂಸ್ಕೃತಿಕ ಉತ್ಸವ ಮತ್ತು ಸಮ್ಮೇಳನದಲ್ಲಿ” ನೀಡಲಿರುವ “ಅಂಜನಾದ್ರಿ ಸದ್ಭಾವನ” ಪ್ರಶಸ್ತಿಗೆ ಶ್ರೀಮತಿ ರಜನಿ.ವಿ.ಪೈಯವರನ್ನು ಆಯ್ಕೆಮಾಡಲಾಗಿದೆ.

“ಕರ್ನಾಟಕ ಮಾತಾ” ಕನ್ನಡ ಪಾಕ್ಷಿಕ ಪತ್ರಿಕೆಯ ಮೂಲಕ ಮಾಧ್ಯಮದಲ್ಲಿ “ಮಹಿಳಾ ಜಾಗೃತಿ” ಲೇಖನಗಳ ಮೂಲಕ ಅನೇಕ ಜನಪರ, ಸಾಮಾಜಿಕ ಅಭಿವೃದ್ಧಿಯ ಲೇಖನಗಳನ್ನು ಬರೆದು ಪ್ರಸ್ತುತ “ಸಂಜೆ ಪ್ರಭ” ಪತ್ರಿಕೆಯಲ್ಲಿ ಸಹ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ರಜನಿ.ವಿ.ಪೈ ರವರು ಮಧ್ಯಮರಂಗಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅವರಿಗೆ ಅಂಜನಾದ್ರಿ ಸಾಂಸ್ಕೃತಿಕ ಉತ್ಸವ ಸಮಿತಿಯು “ಅಂಜನಾದ್ರಿ ಸದ್ಭಾವನ” ಪ್ರಶಸ್ತಿಗೆ ಆಯ್ಕೆಮಾಡಿದೆ.

 
 
 
 
 
 
 
 
 
 
 

Leave a Reply