ಸ್ವತಃ ಕೃಷಿಕನಾಗಿದ್ದು ಅದರೊಂದಿಗೆ ಬ್ಯಾಂಡ್ ಸೇವೆಯಲ್ಲಿ ಭಜನಾ ಕುಣಿತ, ದೈವ ನರ್ತನ, ಮತ್ತು ದೇವರ ಸೇವೆಗಳಲ್ಲಿ ಅಚ್ಚುಕಟ್ಟಿನ ವ್ಯವಸ್ಥೆಯನ್ನು ಮೈಗೂಡಿಸಿಕೊಂಡು, ಕೊಡವೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದು ಸುಮಾರು 35 ವರ್ಷದಿಂದ ಸಾಮಾಜಿಕವಾಗಿ ತೊಡಗಿಸಿ ಕೊಂಡಿರುವ ಆರೂರು ಎ.ರಾಜ ಸೇರಿಗಾರ್ ರವರಿಗೆ ಕಬಿಯಾಡಿ ಶ್ರೀ ದುರ್ಗಂಬಾಭವಾನಿ ದೇವಸ್ಥಾನ ವತಿಯಿಂದ ಬುಧವಾರದಂದು ಅಭಿನಂದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಕಬಿಯಾಡಿ ಶ್ರೀ ದುರ್ಗಂಬಾಭವಾನಿ ದೇವಸ್ಥಾನದ ಅಧ್ಯಕ್ಷ ಅಶ್ವಿನ್ ಆಚಾರ್ಯ ಓಂತಿಬೆಟ್ಟು, ಕಾರ್ಯದರ್ಶಿ ಉಪೇಂದ್ರ ಪ್ರಭು, ಗೋಪಾಲ ನಾಯಕ್ ಆತ್ರಾಡಿ, ಪ್ರಭಾಕರ್ ಶೆಟ್ಟಿ, ವಾಸುದೇವ ನಾಯಕ್ ಉಪಸ್ಥಿತರಿದ್ದರು.