ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ‘ಕೊರೊನಾ ಸೇನಾನಿ’ ಪ್ರಶಸ್ತಿ ಪ್ರದಾನ

ಉಡುಪಿ: ಪತ್ರಿಕೆಯೊಂದು ನೀಡುವ ‘ಕೊರೊನಾ ಸೇನಾನಿ’ ಪ್ರಶಸ್ತಿ ಪ್ರದಾನ ಉಡುಪಿ ಪ್ರೆಸ್ ಕ್ಲಬ್ ವೇದಿಕೆಯಲ್ಲಿ ಇಂದು ನಡೆಯಿತು. ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ‘ಕೊರೊನಾ ಸೇನಾನಿ’ ಪ್ರಶಸ್ತಿ ಪ್ರದಾನ ಮಾಡಿದರು.
​​
ಕಳೆದ ಒಂದು ವರ್ಷದಲ್ಲಿ ಒಳಕಾಡು ಅವರು ಕೊರೊನಾದಿಂದಾಗಿ ಸಾವನ್ನಪ್ಪಿದ ಹಲವು ವ್ಯಕ್ತಿಗಳ ಅಂತ್ಯ ಸಂಸ್ಕಾರ ನಡೆಸಿದ್ದಲ್ಲದೆ, ಹಲವು ರೀತಿಯಲ್ಲಿ ಕಾಯಿಲೆಪೀಡಿತ ವ್ಯಕ್ತಿಗಳಿಗೆ, ಅನಾಥರಿಗೆ, ನಿರ್ಗತಿಕರಿಗೆ ಮಾನವೀಯ ನೆಲೆಯಲ್ಲಿ ಸೇವೆ ಒದಗಿಸಿದ್ದರು.

ವಾರ್ತಾಧಿಕಾರಿ ಮಂಜುನಾಥ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ವರದಿಗಾರ ಬಾಲಚಂದ್ರ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply