ಉಡುಪಿ: ಈ ಬಾರಿಯ ‘ನಿಡಂಬೂರು ಶ್ರೀ’ ಪ್ರಶಸ್ತಿಗೆ ಹಿರಿಯ ವಯಲಿನ್ ವಾದಕಿ ಕಿದುಯೂರು ವಸಂತಿ ರಾಮಭಟ್ ಆಯ್ಕೆಗೊಂಡಿರುತ್ತಾರೆ.
ನಿಡಂಬೂರು ಮಾಗಣೆಯ ಹಿರಿಯ ಸಾಧಕರಿಗೆ ನೀಡಲ್ಪಡುವ ಈ ಪ್ರಶಸ್ತಿಯನ್ನು ಡಾ. ನಿಡಂಬೂರು ಬೀಡು ವಿಜಯ ಬಲ್ಲಾಳರು ಸ್ಥಾಪಿಸಿದ್ದರು. ಈ ಬಾರಿಯ ಪ್ರಶಸ್ತಿ ಪ್ರದಾನ ಏಪ್ರಿಲ್ 11ರ ಭಾನುವಾರ, ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಇಡೀ ದಿನ ಮಧೂರ ಮಾಧುರ್ಯ ಸಮಾರಂಭ ನಡೆಯಲಿದ್ದು, ಅಪರಾಹ್ನ 3ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂಬುದಾಗಿ ಡಾ. ನಿ. ಬೀ. ವಿಜಯ ಬಲ್ಲಾಳ್ ತಿಳಿಸಿರುತ್ತಾರೆ.