ಪ್ರಸಾದ್ ನೇತ್ರಾಲಯ ಉಡುಪಿ ಇದರ ಅಂಗ ಸಂಸ್ಥೆಯಾದ ನೇತ್ರ ಜ್ಯೋತಿ ಅರೆ ವೈದ್ಯಕೀಯ ವಿಜ್ಞಾನ ವಿದ್ಯಾಲಯ, ಉಡುಪಿ ಇದರ ಮೂರು ಮಂದಿ ವಿದ್ಯಾರ್ಥಿನಿಯರು 2022ರಲ್ಲಿ ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯವು ನಡೆಸಿರುವ ಪದವಿ ಪರೀಕ್ಷೆಗಳಲ್ಲಿ ರಾಜ್ಯ ರ್ಯಾಂಕ್ ಪಡೆದಿರುತ್ತಾರೆ.
ಕುಮಾರಿ ಕೀರ್ತನಾ – ಆಸ್ಪತ್ರೆ ಆಡಳಿತೆ ಪದವಿ (Bachelor in Hospital Administration)) – ಏಳನೆ ರ್ಯಾಂಕ್ , ಕುಮಾರಿ ವೀಣಾ ನಾಯಕ್ – ಆಸ್ಪತ್ರೆ ಆಡಳಿತೆ ಪದವಿ (Bachelor in Hospital Administration) – ಎಂಟನೆ ರ್ಯಾಂಕ್ , ಕುಮಾರಿ ರಮ್ಯಾ ಕೆ ಖಾರ್ವಿ – ಬಿಎಸ್ಸಿ – ಆಪ್ಟೋಮೆಟ್ರಿ ̲ ̲ಎಂಟನೆ ರ್ಯಾಂಕ್, ವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಕೃಷ್ಣ ಪ್ರಸಾದ್ ಕೂಡ್ಲುರವರು ರ್ಯಾಂಕ್ ವಿಜೇತರನ್ನು ಅಭಿನಂದಿಸಿರುತ್ತಾರೆ.