​ಉದ್ಯಾವರದ ಆಸರೆಯ ಬೆಳಕು ತಂಡದಿಂದ ​ ಗಂಗೊಳ್ಳಿಯ ಅಶ್ವತ್ಥಮ್ಮನ​ವರಿಗೆ ಅಭಿನಂದನೆ ​

ಅಜ್ಜಿ ಎಂದೇ ಜನಜನಿತರಾಗಿರುವ ಇಂದು ಸಾಲಿಗ್ರಾಮ ಶ್ರೀಗುರುನರಸಿಂಹ ದೇವಸ್ಥಾನದ ವಠಾರದಲ್ಲಿ  ನಯನ ಗಣೇಶ್,​ ​ರಾಜೇಶ್ ಕುಂದರ್,​ ​ರವಿ ಪಡುಕೆರೆ ನೇತೃತ್ವದ ಆಸರೆಯ ಬೆಳಕು ಉದ್ಯಾವರ ತಂಡದ ವತಿಯಿಂದ ಭಕ್ತಿ ಪೂರ್ವಕವಾಗಿ ಗೌರವಿಸಲಾಯಿತು.
ಸಹಾಯ ಮಾಡಲು ಬೇಕಾಗಿರುವು​​ದು ಒಳ್ಳೆಯ ಮನಸ್ಸು ಎಂಬ ಧ್ಯೇಯದ ಅಡಿಯಲ್ಲಿ​ ಸರ್ವರಿಗೂ ಒಳಿತಾಗಲಿ, ಲೋಕಕ್ಕೆ ಹಿತವಾಗಲಿ ಮತ್ತು ಹಸಿದವರ ಹೊಟ್ಟೆ ತುಂಬಲಿ ಎನ್ನುವ ಪ್ರಾರ್ಥನೆ ಯೊಂದಿಗೆ ತಾನು ಸಂಗ್ರಹಿಸಿದ​ ಭಿಕ್ಷಾಟನೆಯ ಹಣದಲ್ಲಿ ಸಾಲಿಗ್ರಾಮ ದೇವಳದ ಅನ್ನದಾನ ನಿಧಿಗೆ 1ಲಕ್ಷ ನೀಡಿದ ವೃದ್ಧೆ ಅಶ್ವಥ್ಥಮ್ಮನವರು ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಾಗಿದ್ದಾರೆ. 
ಉಡುಪಿ ಜಿಲ್ಲೆಯ ವಿವಿದೆಡೆ ಭಿಕ್ಷಾಟನೆ ಮಾಡಿ ಸಂಗ್ರಹಿಸುವ ಹಣವನ್ನು ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ದಾನವಾಗಿ ನೀಡುತ್ತಾರೆ. ತನ್ನ ಸ್ವಂತ ಕುಟುಂಬ ಬಡತನದಲ್ಲಿದ್ದರು ಹಣವನ್ನು ಉಳಿತಾಯ ಮಾಡಿ ದಾನ ಮಾಡುವ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ. 
 
ಕಂಚಗೋಡು ದೇವಸ್ಥಾನಕ್ಕೆ 1.5 ಲಕ್ಷ ರೂ., ಪಂಪ ದೇವಸ್ಥಾನಕ್ಕೆ ಒಂದು ಲಕ್ಷ ರೂಪಾಯಿ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ 1.5 ಲಕ್ಷ ರೂಗಳನ್ನು ಕೂಡ ದೇಣಿಗೆ ನೀಡಿದ್ದಾರೆ. ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನಕ್ಕೆ ರೂ 1ಲಕ್ಷ ದೇಣಿಗೆಯನ್ನು ಅನ್ನದಾನಕ್ಕೆ ನೀಡಿರುತ್ತಾರೆ.
​​
 
 
 
 
 
 
 
 
 
 
 

Leave a Reply