ಮಮತಾ ವಾಣಿ ರಾವ್, ಮಂಜೇಶ್ವರ ಅವರ ಚೊಚ್ಚಲ ಹನಿಗವನ ಸಂಕಲನ “ತುಡಿತ ” ಬಿಡುಗಡೆ.

ಅಮೃತ ಪ್ರಕಾಶ ಪತ್ರಿಕೆಯ ವತಿಯಿಂದ ನಡೆಯುವ ಸರಣಿ ಕೃತಿ ಬಿಡುಗಡೆ ಕಾರ್ಯಕ್ರಮದ ಅಂಗವಾಗಿ 29ನೇ ಕೃತಿ ಮಮತಾ ವಾಣಿ ರಾವ್, ಮಂಜೇಶ್ವರ ಅವರ ಚೊಚ್ಚಲ ಹನಿಗವನ ಸಂಕಲನ “ತುಡಿತ ” ಇ೦ದು ಮಂಗಳೂರು ಪತ್ರಿಕಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ವಹಿಸಿದ್ದರು. ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ವಿಜೇತೆ ,ಶುಶ್ರೂಷಕ ಅಧಿಕಾರಿ, ಕವಯಿತ್ರಿ ಸುಭಾಷಿಣಿ ಬೆಳ್ತಂಗಡಿ ಅವರು ಕೃತಿ ಬಿಡುಗಡೆ ಮಾಡಿದರು.

ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ ಮಾಲತಿ ಶೆಟ್ಟಿ ಮಾಣೂರು ,ಅಮೃತ ಪ್ರಕಾಶ ಪತ್ರಿಕೆಯ ಉಪಸಂಪಾದಕರಾದ ಡಾ.ಕಾಸರಗೋಡು ಅಶೋಕ್ ಕುಮಾರ್ ಹಾಗೂ ಕವಯಿತ್ರಿ ಮಮತಾ ವಾಣಿ ರಾವ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply