ಡಾ ಮಹಾಬಲೇಶ್ವರ ರಾವ್ ಅವರಿಗೆ ಶಿವರಾಮ ಕಾರಂತ ಪುರಸ್ಕಾರ

ಖ್ಯಾತ ಶಿಕ್ಷಣ ಚಿಂತಕ ಹಾಗೂ ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಅವರಿಗೆ ಮೂಡಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನ ೨೦೨೧ರ ಶಿವರಾಮ ಕಾರಂತ ಪುರಸ್ಕಾರವನ್ನು ಅವರ ‘ ಕೈ ಹಿಡಿದು ನಡೆಸಬೇಕೇ?’ ಕೃತಿಗೆ ಘೋಷಿಸಿದೆ.ಇದು ಪ್ರಶಸ್ತಿ ಫಲಕ ಹಾಗೂ ಹತ್ತು ಸಾವಿರ ರೂಪಾಯಿ ನಗದು ಒಳಗೊಂಡಿದೆ. ಸ್ವತಂತ್ರ ಹಾಗೂ ಅನುವಾದ ವಿಚಾರ ಸಾಹಿತ್ಯ ನಿರ್ಮಾಣದ ಮೂಲಕ ಡಾ ರಾವ್ ಈ ವರೆಗೆ ೧೫೨ ಕೃತಿಗಳನ್ನು ಪ್ರಕಟಿಸಿದ್ದಾರೆ.

 
 
 
 
 
 
 
 
 
 
 

Leave a Reply