ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮೊದಲ ಮಕ್ಕಳ, ರಕ್ತದ ಗುಂಪು ಎಬಿಒ-ಹೊಂದಾಣಿಕೆಯಿಲ್ಲದ ಮೂತ್ರಪಿಂಡ ಕಸಿ.

ಮಣಿಪಾಲ, 3ನೇ ಫೆಬ್ರವರಿ 2022: ಕಸ್ತೂರ್ಬಾ ಆಸ್ಪತ್ರೆಯು  ಮೂತ್ರಪಿಂಡದ ವೈಫಲ್ಯವನ್ನು ಹೊಂದಿದ್ದ ಮತ್ತು ಕಳೆದ ಆರು ತಿಂಗಳಿಂದ ಹಿಮೋಡಯಾಲಿಸಿಸ್ ನಲ್ಲಿರುವ  ಮಗುವಿಗೆ ಮೊಟ್ಟ  ಮೊದಲ ಬಾರಿಗೆ   ರಕ್ತದ ಗುಂಪು ಎಬಿಒ – ಹೊಂದಾಣಿಕೆಯಾಗದ ಮೂತ್ರಪಿಂಡ ಕಸಿ ಮಾಡಿತು. ಶಿವಮೊಗ್ಗದ ಒ ಪಾಸಿಟಿವ್ ರಕ್ತದ ಗುಂಪಿನ 14 ವರ್ಷದ ಬಾಲಕನಿಗೆ 3 ವರ್ಷಗಳ ಹಿಂದೆ ಕಿಡ್ನಿ ವೈಫಲ್ಯವಾಗಿರುವುದು ಪತ್ತೆಯಾಗಿತ್ತು. ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯು ಮುಂದಿನ ಎರಡು ವರ್ಷಗಳಲ್ಲಿ ಇನ್ನಷ್ಟು  ಪ್ರಗತಿ ಹೊಂದಿತು, ಇದರ ಪರಿಣಾಮವಾಗಿ ಬಾಲಕನ  ದೈಹಿಕ ಬೆಳವಣಿಗೆ ಮತ್ತು  ಚಟುವಟಿಕೆ ಕಡಿಮೆಯಾಯಿತು.
ಹೆಚ್ಚಿನ ಆರೈಕೆಗಾಗಿ ಮಗುವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ  ಮೂತ್ರಪಿಂಡ  ವಿಭಾಗಕ್ಕೆ ಶಿಫಾರಸು ಮಾಡಲಾಯಿತು . ಮಗುವನ್ನು ಮೌಲ್ಯಮಾಪನ ಮಾಡಿದ ನಂತರ, ಲಭ್ಯವಿರುವ ಚಿಕಿತ್ಸಾ ಆಯ್ಕೆಗಳ ಬಗ್ಗೆ ಕುಟುಂಬಕ್ಕೆ ಸಲಹೆ ನೀಡಲಾಯಿತು. ಕುಟುಂಬವು ಸಂಭಾವ್ಯ ಮೂತ್ರಪಿಂಡ ದಾನಿ ಮತ್ತು ರಕ್ತದ ಹೊಂದಾಣಿಕೆಯ ಗುಂಪಿನಂತೆ   ತಂದೆಯ ಮೂತ್ರಪಿಂಡ ಕಸಿ ಮಾಡುವಿಕೆಯನ್ನು ಆಯ್ಕೆ ಮಾಡಿಕೊಂಡಿತು. ಆದಾಗ್ಯೂ, ಮೌಲ್ಯಮಾಪನದಲ್ಲಿ ತಂದೆಗೆ ಮಧುಮೇಹ ಇರುವುದು ಪತ್ತೆಯಾಯಿತು ಮತ್ತು ಕಿಡ್ನಿ ದಾನಿಯಾಗಿ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಬಿ  ಪಾಸಿಟಿವ್ ರಕ್ತದ  ಗುಂಪು ಹೊಂದಿದ್ದ  ತಾಯಿ ಮೂತ್ರಪಿಂಡ ದಾನಕ್ಕೆ ಮುಂದೆ ಬಂದರು ಆದ್ದರಿಂದ  ಎ ಬಿ ಒ -ಹೊಂದಾಣಿಕೆಯಿಲ್ಲದ ಕಸಿಗೆ ಆಯ್ಕೆ ಮಾಡಿಕೊಳ್ಳಲಾಯಿತು.
ಅಂತಹ ಕಸಿಗೆ ಪ್ಲಾಸ್ಮಾಫೆರೆಸಿಸ್ ಮೂಲಕ ಮಗುವಿನ ರಕ್ತದಿಂದ ಪೂರ್ವನಿರ್ಧರಿತ ಪ್ರತಿಕಾಯಗಳನ್ನು ತೆಗೆದು ಹಾಕುವುದು ಮತ್ತು ಕಸಿ ಮಾಡುವ ಮೊದಲು ಹೆಚ್ಚುವರಿ ಇಮ್ಯುನೊಸಪ್ರೆಶನ್ ಔಷಧಿಗಳ ಬಳಕೆ ಅಗತ್ಯವಿರುತ್ತದೆ. ಅಗತ್ಯ ನೀತಿ ನಿಯಮಗಳನ್ನು  ಪೂರ್ಣಗೊಳಿಸಿದ ನಂತರ, ಮಗುವಿಗೆ ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಅರುಣ್ ಚಾವ್ಲಾ ಮತ್ತು ಅವರ ತಂಡ  ಹಾಗೂ  ಟ್ರಾನ್ಸ್ಫ್ಯೂಷನ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ. ಶಮೀ ಶಾಸ್ತ್ರಿ ಮತ್ತು ಅವರ ತಂಡದ    ಸಹಕಾರದೊಂದಿಗೆ ಜನವರಿ 4, 2022 ರಂದು ಎ ಬಿ ಒ -ಹೊಂದಾಣಿಕೆಯಿಲ್ಲದ ಮೂತ್ರಪಿಂಡ ಕಸಿ ಮಾಡಲಾಯಿತು.
ನಂತರ 10ನೇ ದಿನದಂದು ಕಿಡ್ನಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರಿಂದ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ  ಮಾಡಲಾಯಿತು.  ಕುಟುಂಬವು ಬಾಲಕನ ಅರೋಗ್ಯ ಫಲಿತಾಂಶದಿಂದ ಅತ್ಯಂತ ತೃಪ್ತರಾಗಿದ್ದರು, ಏಕೆಂದರೆ ತಾಯಿ-ಮಗ ಜೋಡಿಯು ಪೂರ್ಣ ಆರೋಗ್ಯದೊಂದಿಗೆ ನಿಯಮಿತವಾದ ಅನುಸರಣಾ ಭೇಟಿಗಾಗಿ ಆಸ್ಪತ್ರೆಗೆ ಬರುತ್ತಿರುವುದನ್ನು ನಾವು ನೋಡಿದೆವು. ಮೂತ್ರಪಿಂಡ ಕಸಿಯ ವೆಚ್ಚವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿಧಿಯಿಂದ ಭರಿಸಲಾಯಿತು, ಇದು ಕುಟುಂಬದ ಆರ್ಥಿಕ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡಿತು.
ಕಳೆದ ಕೆಲವು ವರ್ಷಗಳಿಂದ ಮಕ್ಕಳಲ್ಲಿ ಮೂತ್ರಪಿಂಡದ ಕಾಯಿಲೆ ಮತ್ತು ವೈಫಲ್ಯದ ಸಂಭವವು ಹೆಚ್ಚುತ್ತಿದೆ. ಮೂತ್ರ ಪಿಂಡದ ಕಾಯಿಲೆ ಇರುವ ಮಕ್ಕಳಿಗೆ ಆರಂಭಿಕ ಗುರುತಿಸುವಿಕೆ, ಸಮಯೋಚಿತ ಚಿಕಿತ್ಸೆ ಮತ್ತು ದೀರ್ಘಾವಧಿಯ ಆರೈಕೆಯ ಅಗತ್ಯವಿರುತ್ತದೆ. ಮೂತ್ರಪಿಂಡ ವೈಫಲ್ಯದ ರೋಗಿಗಳಿಗೆ ಡಯಾಲಿಸಿಸ್ ಮತ್ತು ಮೂತ್ರಪಿಂಡ ಕಸಿ ಮಾತ್ರ ಜೀವ ಉಳಿಸುವ ಕ್ರಮಗಳಾಗಿವೆ ಎಂದು ಮೂತ್ರಪಿಂಡ ವಿಭಾಗದ ಮುಖ್ಯಸ್ಥರಾದ ಡಾ. ಶಂಕರ್ ಪ್ರಸಾದ್ ಎನ್ ಹೇಳಿದರು.
ಅಗಾಧವಾದ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿರುವ ಮಕ್ಕಳಲ್ಲಿ, ಮೂತ್ರಪಿಂಡ ಕಸಿ ಡಯಾಲಿಸಿಸ್‌ಗಿಂತ ಉತ್ತಮವಾದ ಆಯ್ಕೆಯಾಗಿದೆ ಮತ್ತು ಉತ್ತಮ ಗುಣಮಟ್ಟದ ಜೀವನವನ್ನು ಒದಗಿಸುತ್ತದೆ. ಮೂತ್ರಪಿಂಡ ಕಸಿ ಮಾಡುವಿಕೆಗೆ ಒಂದು ಪ್ರಮುಖ ಅಡಚಣೆಯೆಂದರೆ ಸೂಕ್ತವಾದ ದಾನಿಯನ್ನು ಕಂಡುಹಿಡಿಯುವುದು.
ಮರಣಾ ನಂತರದ  ದಾನದ ಕಡಿಮೆ ದರಗಳ ಉಪಸ್ಥಿತಿಯಲ್ಲಿ, ಜೀವಂತ  ಸಂಬಂಧಿ ದಾನಿಗಳು ಭಾರತೀಯರಲ್ಲಿ ಮೂತ್ರಪಿಂಡದ  ಮುಖ್ಯ  ಮೂಲವಾಗಿದೆ. ರಕ್ತದ ಗುಂಪಿನ ಅಸಾಮರಸ್ಯವು ಜೀವಂತ ಮೂತ್ರಪಿಂಡ ದಾನಕ್ಕೆ ಪ್ರಮುಖ ತಡೆಗೋಡೆಯಾಗಿದೆ, ಇದನ್ನು ಇತ್ತೀಚೆಗೆ ಪರಿಣಾಮಕಾರಿಯಾಗಿ ನಿವಾರಿಸಲಾಗಿದೆ.
ಮಕ್ಕಳಲ್ಲಿ, ಎ ಬಿ ಒ  ಹೊಂದಾಣಿಕೆಯಾಗದ ಕಸಿ ಮಾಡುವಿಕೆ, ಅಂದರೆ ರಕ್ತದ ಗುಂಪುಗಳು ಹೊಂದಿಕೆಯಾಗದಿದ್ದಾಗ, ಮೂತ್ರಪಿಂಡ  ಕಸಿಗೆ ಸಾಕಷ್ಟು ತರಬೇತಿ  ಮತ್ತು ಪರಿಣತಿಯ ಅಗತ್ಯವಿರುತ್ತದೆ ಎಂದು ಮಕ್ಕಳ ಮೂತ್ರಪಿಂಡ ವಿಭಾಗದ ತಜ್ಞರಾದ ಡಾ. ದರ್ಶನ್ ರಂಗಸ್ವಾಮಿ ಅವರು ಹೇಳಿದರು. ಡಾ. ದರ್ಶನ್ ರಂಗಸ್ವಾಮಿ ಅವರ ನೇತೃತ್ವದಲ್ಲಿ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಹೊಸದಾಗಿ ರೂಪುಗೊಂಡ  ಮಕ್ಕಳ ಮೂತ್ರಪಿಂಡ  ವಿಭಾಗವು, ಮಕ್ಕಳಲ್ಲಿನ  ಎಲ್ಲಾ ಸಂಕೀರ್ಣ ಮೂತ್ರ ಪಿಂಡಗಳಿಗೆ ಸಂಬಂಧಿಸಿದ ಕಾಯಿಲೆಗಳನ್ನು ನಿರ್ವಹಿಸಲು ಸುಸಜ್ಜಿತವಾಗಿದೆ.
ಎಲ್ಲಾ ವಯಸ್ಸಿನ ಮಕ್ಕಳಿಗೆ ಡಯಾಲಿಸಿಸ್, ಮೂತ್ರಪಿಂಡದ ಬಯಾಪ್ಸಿ ಮತ್ತು ಕಿಡ್ನಿ ಕಸಿ ಸೌಲಭ್ಯವು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲಭ್ಯವಿದ್ದು ಕರಾವಳಿ ಮತ್ತು ಮಧ್ಯ ಕರ್ನಾಟಕದ ರೋಗಿಗಳಿಗೆ ಅಗತ್ಯವಿರುವ ಎಲ್ಲಾ ಚಿಕಿತ್ಸೆಯನ್ನು  ಒದಗಿಸುತ್ತಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಅವರು ಹೇಳಿದ್ದಾರೆ.
 
 
 
 
 
 
 
 
 
 
 

Leave a Reply