ಸುರತ್ಕಲ್ ~ ಕೆ.ಎಲ್.ಕುಂಡಂತಾಯರಿಗೆ ಅಭಿನಂದನೆ

ಸುರತ್ಕಲ್  ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ‌ 2022 , ಮೇ4 ರಿಂದ 8 ರ ವರೆಗೆ ನಡೆದ ನಾರಿಕೇಳ ಗಣಯಾಗ, ಲಘು ರುದ್ರಯಾಗ, ಲಲಿತಾ ಸಹಸ್ರ ಕದಳೀಯಾಗ, ರಾಮತಾರಕ ಮಂತ್ರಯಾಗ ಹಾಗೂ ಶತಚಂಡಿಕಾ ಯಾಗ ಮುಂತಾದ ಸತ್ಕಾರ್ಯಗಳ ಸಂದರ್ಭದಲ್ಲಿ ಉಭಯ ಜಿಲ್ಲೆಗಳ ನೂರಕ್ಕೂ ಹೆಚ್ಚು ದೇವಾಲಯಗಳ ಕುರಿತು ಅಧ್ಯಯನ ನಡೆಸಿ  ಸಂಶೋಧನಾತ್ಮಕ ಲೇಖನಗಳನ್ನು ಬರೆದ, ಜಾನಪದ ಸಂಶೋಧಕ, ನಾಗಾರಾಧನೆ, ಬೂತಾರಾಧನೆ ಸಹಿತ ಜನಪದರ ಆಚರಣೆಗಳ ಕುರಿತು ಬರೆದ ಕೆ.ಎಲ್.ಕುಂಡಂತಾಯ ಅವರನ್ನು ಸುರತ್ಕಲ್ ಶಾಸಕ ಡಾ.ವೈ ಭರತ ಶೆಟ್ಟಿ, ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಯಕ್ಷಗಾನ ಕಲಾವಿದ ಕೆ.ಗೋವಿಂದ ಭಟ್, ದೇವಳದ ಆನುವಂಶಿಕ ಮೊಕ್ತೇಸರ
ಡಾ.ಮಯ್ಯ ಮುಂತಾದವರ ಉಪಸ್ಥಿತಿಯಲ್ಲಿ ಸಮ್ಮಾನಿಸಲಾಯಿತು.
 
 
 
 
 
 
 
 
 
 
 

Leave a Reply