ದಿನಾಂಕ 22 ನವೆಂಬರಂದು ಆಳ್ವಾಸ್ ವಿದ್ಯಾರ್ಥಿಯಾದ ತಿಲಕ್ ಕುಲಾಲ್ ರವರು ರಚಿಸಿದ ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಅಮ್ಮನವರ ಲೀಫ್ ಆರ್ಟ್ ಶ್ರೀ ಕ್ಷೇತ್ರ ಕಟೀಲಿಗೆ ಹಸ್ತಾಂತರಿಸಲಾಯಿತು.
ಅರ್ಚಕರಾದ ಅನಂತ ಪದ್ಮನಾಭ ಅಸ್ರಣ್ಣ ಹಾಗೂ ಶ್ರೀಹರಿ ನಾರಾಯಣ ದಾಸ ಅಸ್ರಣ್ಣರು ಹಾಗೂ ಭಕ್ತ ಸಮೂಹದ ಉಪಸ್ಥಿತಿಯಲ್ಲಿ ಕಟೀಲಮ್ಮನವರ ಲೀಫ್ ಆರ್ಟ್ ಅನ್ನು ಶ್ರೀ ಕ್ಷೇತ್ರಕ್ಕೆ ಹಸ್ತಾಂತರಿಸ ಲಾಯಿತು ಹಾಗೂ ತಿಲಕ್ ಕುಲಾಲ್ ರವರಿಗೆ ದೇವಾಸ್ಥಾನದ-ವತಿಯಿಂದ ಗೌರವಿಸಲಾಯಿತು
ಹಾಗೂ ಸದ್ರಿ ಕಲಾವಸ್ತುವನ್ನು ದೇವಳದ ಪದವಿ ಪೂರ್ವ ಕಾಲೇಜಿನ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಯಿತು