ಕಳೆದ ವರ್ಷದ ಬರೆದ ‘ಕಾಪ’ ತುಳು ನಾಟಕ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಸ್ಥೆಯ ಕಳೆದ ವರ್ಷದ ರಂಗಹಬ್ಬದಲ್ಲಿ ಪ್ರದರ್ಶನಗೊಂಡಿತ್ತು. ಅದರ ಬೆನ್ನಿಗೇ ಕೊರೊನಾ ಬಂದಿದ್ದರಿಂದ ವಿವಿಧೆಡೆ ಪ್ರದರ್ಶನಗೊಳ್ಳುವ ಅವಕಾಶ ತಪ್ಪಿ ಹೋಗಿತ್ತು.
ಉಡುಪಿ ಅಜ್ಜರಕಾಡು ಬಯಲು ರಂಗಮಂದಿರದಲ್ಲಿ 2021,ಮಾರ್ಚ್ 22ರಿಂದ 28ರವರೆಗೆ ಸುಮನಸಾ ಕೊಡವೂರು ಸಂಸ್ಥೆಯ ‘ರಂಗ ಹಬ್ಬ-9’ ನಡೆಯುತ್ತಿದೆ. ಅದರಲ್ಲಿ ಐದನೇ ದಿನ ಅಂದರೆ ಮಾರ್ಚ್ 26ರಂದು ಸಂಜೆ 6.30ಕ್ಕೆ ‘ಕಾಪ’ ಬಿಡುಗಡೆಗೊಳ್ಳುತ್ತಿದೆ. ಖ್ಯಾತ ಚಿಂತಕಿ ಆತ್ರಾಡಿ ಅಮೃತಾ ಶೆಟ್ಟಿ ನಾಟಕ ಕೃತಿ ಅನಾವರಣಗೊಳಿಸುತ್ತಿದ್ದಾರೆ.
ಸುಮನಸಾ ಕೊಡವೂರು ಸಂಸ್ಥೆ ಇದರ ಜವಾಬ್ದಾರಿ ವಹಿಸಿಕೊಂಡು, ಕೃತಿ ಹೊರ ತರುತ್ತಿದ್ದಾರೆ.ಬೆಳಕು ಪ್ರಕಾಶನ ಪ್ರಕಟಿಸುತ್ತಿರುವ ಶಿಬಾರ್ಲರವರ ಎರಡನೇ ಕೃತಿ ಇದು.