ಡಾ.ಬಿ.ಗೋಪಾಲಾಚಾರ್ಯರಿಗೆ “ಸಂಸ್ಕೃತರಾಷ್ಟ್ರ ಗೌರವ”

ಒರಿಸ್ಸಾದ ಭದ್ರಕ ನಗರದ ಸರಸ್ವತಿ ವೇದ ವಿದ್ಯಾಪೀಠದಲ್ಲಿ ದಿನಾಂಕ 14.04.2022 ರಂದು ಸೌರಯುಗಾದಿಯ ಪರ್ವ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಸಂಸ್ಕೃತ ಪ್ರಚಾರದ ಸಂಸ್ಥೆಯಾದ ಲೋಕಭಾಷಾ ಪ್ರಚಾರ ಪರಿಷತ್ತಿನಿಂದ
ಉಡುಪಿಯ ಡಾ.ಬಿ.ಗೋಪಾಲಾಚಾರ್ಯರನ್ನು “ಸಂಸ್ಕೃತರಾಷ್ಟ್ರ ಗೌರವ” ಎಂಬ ಪ್ರಮಾಣ ಪತ್ರದೊಂದಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಲೋಕಭಾಷಾಪ್ರಚಾರಪರಿಷತ್ತಿನ ಸಂಸ್ಥಾಪಕರಾದ ಪ್ರೋ.ಸದಾನಂದ ದೀಕ್ಷಿತ್ ಮೊದಲಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply