“ಜಿ.ಕೆ.ಐತಾಳರ ಆಯ್ದ ಕತೆಗಳು” ಕೃತಿ ಬಿಡುಗಡೆ ಸಮಾರಂಭ

ಕನ್ನಡದ ಖ್ಯಾತ ಕಥೆಗಾರ ದಿವಂಗತ ಜಿ.ಕೆ.ಐತಾಳರ ಸಂಸ್ಮರಣೆ ಹಾಗೂ ಬೆಳಗೋಡು ರಮೇಶ್ ಭಟ್ ರ ಸಂಪಾದಕತ್ವದಲ್ಲಿ ಸೋಮಯಾಜಿ ಪ್ರಕಾಶನ ಹೊರತಂದಿರುವ ಜಿ.ಕೆ.ಐತಾಳರ ಆಯ್ದ ಕತೆಗಳು ಕೃತಿ ಬಿಡುಗಡೆ ಸಮಾರಂಭವು ಕೋಟದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯಾಲಯ ದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಜಿ.ಕೆ.ಐತಾಳರ ಪತ್ರಿಕೋದ್ಯಮ ಹವ್ಯಾಸ,ಅವರ ಸಮಾಜಮುಖಿ ಬದುಕು,ರಂಗಪ್ರಯೋಗಾಸಕ್ತಿ, ಸಾಹಿತ್ಯ,ಬದುಕು ಬರೆಹ ಕುರಿತು ಬೆಳಗೋಡು ರಮೇಶ್ ಭಟ್ ಅವರು ಮಾತನಾಡಿದರು. ಗೋಪಾಲಕೃಷ್ಣ ಶೆಟ್ಟಿ , ನಂದಳಿಕೆ ಬಾಲಚಂದ್ರ ರಾಯರು ಸಂಸ್ಮರಣೆ ಮಾತುಗಳನ್ನಾಡಿದರು.

ಜಿ.ಕೆ.ಐತಾಳರ ಆಯ್ದಕತೆಗಳು ಕೃತಿಯನ್ನು ಕುಂದಪ್ರಭ ಪತ್ರಿಕೆ ಸಂಪಾದಕ ಯು.ಎಸ್.ಶೆಣೈ ಬಿಡುಗಡೆ ಮಾಡಿ ಕನ್ನಡದ ಖ್ಯಾತ ಕಥೆಗಾರ ಜಿ.ಕೆ.ಐತಾಳ ಅವರ ಸಮಗ್ರ ಸಾಹಿತ್ಯದ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ವಾಗಬೇಕು ಎಂದು ಅಭಿಪ್ರಾಯಪಟ್ಟರು.

ಪ್ರೊಫೆಸರ್ ಉಪೇಂದ್ರ ಸೋಮಯಾಜಿ ಅವರು ಸ್ವಾಗತಿಸಿದರು. ಅನಂತ ಕೃಷ್ಣ ಐತಾಳ್, ಕಾವೇರಮ್ಮ ಉಪಸ್ಥಿತರಿದ್ದರು. ಸೂರಾಲು ನಾರಾಯಣ ಮಡಿ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಲೇಖಕರು ಹಿತರಕ್ಷಣಾ ಸಂಘ(ರಿ) ಸಾಲಿಗ್ರಾಮ ಚಿತ್ರಪಾಡಿ ಈ ಕಾರ್ಯಕ್ರಮ ಆಯೋಜಿಸಿತ್ತು.

 
 
 
 
 
 
 
 
 

Leave a Reply