ಅಮ್ಮುಂಜೆ ಮೈದಾನದಲ್ಲಿ ಗುಡ್ಡೆ ಟ್ರೋಫಿ 2022 ನೆರವೇರಿತು

ಉಪ್ಪೂರು ಅಮ್ಮುಂಜೆ ಮೈದಾನದಲ್ಲಿ ಮೊದಲ ಬಾರಿಗೆ ಸ್ಥಳೀಯ ಯುವಕರ ಶಕ್ತಿಯಿಂದ ಗುಡ್ಡೆ ಟ್ರೋಫಿ 2022 ಅದ್ದೂರಿಯಾಗಿ ನೆರವೇರಿತು. ಊರಿನ ಗಣ್ಯರಾದ ಮ್ಯಾಥ್ಯೂ ಮಸ್ಕರೇನಸ್, ಮಾದವ ಪಾಣ, ಸಂದೀಪ್ ನಾಯಕ್, ರಿಚ್ಚಾರ್ಡ್ ಡಿ’ಸೋಜಾ, ಸುಂದರ್ ಪೂಜಾರಿ, ಸುಕೇಶ್ ಪಾಣ ಹಾಗೂ ದಿನೇಶ್ ಶೆಟ್ಟಿ ಅಮ್ಮುಂಜೆ ದೀಪ ಬೆಳಗಿಸುವುದರೊಂದಿಗೆ ಉದ್ಘಾಟನೆಗೊಂಡಿತು. ಕೊಳಲಗಿರಿ ಅಮ್ಮುಂಜೆಯ ಪ್ರತಿಷ್ಠಿತ ತಂಡಗಳು ಭಾಗವಹಿಸಿದವು. ಅಂತಿಮವಾಗಿ ಹಣಾಹಣಿಯಲ್ಲಿ ಗುಡ್ಡೆ ಫ್ರೆಂಡ್ಸ್ ಸೀನಿಯರ್ ತಂಡ ಟ್ರೋಫಿಯನ್ನು ತಮ್ಮ ಮಡಿಲಿಗೆ ಹಾಕಿಕೊಂಡಿತು.

ಸಮಾರೋಪ ಸಮಾರಂಭದಲ್ಲಿ ಉಪ್ಪೂರು ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾದ ಸಂದೀಪ್ ಶೆಟ್ಟಿ,ಉದ್ಯಮಿಗಳಾದ ಪ್ರಮೋದ್ ನಾಯಕ್, ಬಾಬಾ ಸೋಡ ಪ್ರವರ್ತಕರಾದ ಪ್ರಕಾಶ್ ಶೆಟ್ಟಿ,ಸ್ಟಾನೀ ಡಿ.ಸೋಜ ಉಮೇಶ್,ಸನತ್ ಅಂಗಡಿಬೆಟ್ಟು ಹಾಗೂ ಗುಡ್ಡೆ ಪ್ರೆಂಡ್ಸ್ ಇದರ ಸರ್ವ ಸದಸ್ಯರು ಉಪಸ್ಥಿತರಿದ್ದರು. ಸುಂದರ್ ಪೂಜಾರಿ ಸ್ವಾಗತಿಸಿ ವಂದನಾರ್ಪಣೆಗೈದರು. ಯೋಗಿಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply