ಕಸ್ತೂರ್ಬಾ ಆಸ್ಪತ್ರೆ ಕಾರ್ಪೊರೇಟ್ ಕ್ರಿಕೆಟ್ ಲೀಗ್ (ಸಿ ಸಿ ಎಲ್ 2021)  ಸಮಾರೂಪ ಸಮಾರಂಭ  

 ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಕ್ಕೆ ಮೊದಲ ಸಿಸಿಲ್ 2020 ಪ್ರಶಸ್ತಿ

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಕಾರ್ಪೊರೇಟ್ ಕಂಪನಿ , ಬ್ಯಾಂಕ್ ಗಳು , ವೈದ್ಯಕೀಯ ಸಂಘ , ಆಸ್ಪತ್ರೆಗಳು ಮತ್ತು ಮಾಧ್ಯಮ ಮಿತ್ರರಿಗಾಗಿ 3 ದಿನಗಳ ಕಾಲ ಸೌಹಾರ್ದಯುತವಾಗಿ ಕಾರ್ಪೊರೇಟ್ ಕ್ರಿಕೆಟ್ ಲೀಗ್ (ಸಿ ಸಿ ಎಲ್ 2021) ಆಯೋಜಿಸಿತ್ತು. 

17ನೇ ಡಿಸೆಂಬರ್ 2021ರಂದು ಆರಂಭವಾದ ಕೂಟವು ಇಂದು ಅಂತ್ಯಗೊಂಡಿತು.  ಇಂದು ನಡೆದ ಸಮಾರೂಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೆ ಕೆ ಫಿಶ್ ನೆಟ್ಸ್ ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರಶಾಂತ್ ಬಾಳಿಗಾ  ಪಾಲ್ಗೊಂಡಿದ್ದರು.
ಇವರು ಮಾತನಾಡುತ್ತಾಇಂತಹ  ಕ್ರೀಡಾಕೂಟಗಳು  ಸಂಸ್ಥೆಗಳ ನಡುವೆ ಸ್ನೇಹದ ಸೇತುವೆಯಾಗಲಿದೆ ಎಂದರು  ಮತ್ತು ಆಯೋಜಿಸಿದ ಕಸ್ತೂರ್ಬಾ ಆಸ್ಪತ್ರೆಯ ಆಡಳಿತ ಮಂಡಳಿಯನ್ನು ಶ್ಲ್ಯಾಘಿಸಿದರು. 
  
ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿಗಳಾದ -ಡಾ. ಪಿಎಲ್ಎನ್ ಜಿ ರಾವ್ ಗೌರವ ಅತಿಥಿಯಾಗಿದ್ದರು ಮತ್ತು  ಅವರು ಮಾತನಾಡುತ್ತಾ ,ಇನ್ನಷ್ಟು ಬೇರೆ ಬೇರೆ  ರೀತಿಯ ಕ್ರೀಡಾಕೂಟಗಳು ನಡೆಯಬೇಕು ಎಂದರು. ಕೆ ಎಂ ಸಿ ಡೀನ್ ಡಾ. ಶರತ್ ಕೆ ರಾವ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಸಿ ಒ ಒ  ಶ್ರೀ ಸಿ ಜಿ ಮುತ್ತಣ್ಣ ಮತ್ತು  ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಉಪಸ್ಥಿತರಿದ್ದರು.
ಮೊತ್ತ ಮೊದಲ  ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಕಾರ್ಪೊರೇಟ್ ಕ್ರಿಕೆಟ್ ಲೀಗ್ (ಸಿ ಸಿ ಎಲ್ 2021) ನಲ್ಲಿ  ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ  ಅವರು ವಿಜೇತರಾಗಿ  ಮಾಹೆ ಮಣಿಪಾಲ  ಅವರು ರನ್ನರ್ ಆಪ್ ಪ್ರಶಸ್ತಿ ಪಡೆದರು.
 ಅವಿನಾಶ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ವಿನಯ್  ಅವರು ಪಂದ್ಯ ಶ್ರೇಷ್ಠ , ವಿಘ್ನೇಶ್  ಅವರು ಉತ್ತಮ ದಾಂಡಿಗ ಮತ್ತು ವಿನಯ್ ಅವರು ಉತ್ತಮ  ದಾಳಿಗಾರ ಪ್ರಶಸ್ತಿ ಪಡೆದರು.
 
 
 
 
 
 
 
 
 
 
 

Leave a Reply