2020 ಭಾರತದ ಅಗ್ರ 50 ಪ್ರಭಾವಿ ವ್ಯಕ್ತಿಗಳ (ಪರಿಸರ ಸಂರಕ್ಷಣೆ) ಪಟ್ಟಿಯಲ್ಲಿ ಡಾ.ಬಾಲಕೃಷ್ಣ ಎಸ್ ಮದ್ದೋಡಿ

ಮಣಿಪಾಲ:ಜಿ-ಟೌನ್ ಸೊಸೈಟಿ ನವದೆಹಲಿ ಸಂಸ್ಥೆಯು ನಡೆಸಿದ ಸಮೀಕ್ಷೆಗಳನ್ನು ಆಧರಿಸಿ ಡಾ.ಬಾಲಕೃಷ್ಣ ಶ್ರೀನಿವಾಸ್ ಮದ್ದೋಡಿ  ಸಹಾಯಕ ಪ್ರೊಫೆಸರ್, ಎಂಐಟಿ, ಮಣಿಪಾಲ  ಇವರಿಗೆ 2020ದ ಭಾರತದ ಅಗ್ರ 50 ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಆಯ್ಕೆ ಮಾಡಲಾಗಿದೆ.
ಪರಿಸರ ಸಂರಕ್ಷಣೆ (ವಿಭಾಗ) ಯಲ್ಲಿ ಅವರು ಕೈಗೊಂಡ ಪರಿಸರ ಸಂರಕ್ಷಣೆ ಜನಪರ ಕಾರ್ಯಗಳು, 100 ವರ್ಷಗಳಿ ಗಿಂತ ಹೆಚ್ಚು ಹಳೆಯದಾದ 5 ಮರಗಳನ್ನು ಮರು ನೆಡುಸುವಿಕೆ, 2000 ಕ್ಕಿಂತ ಹೆಚ್ಚಿನ ಸಸಿಗಳನ್ನು ನೆಡಿಸಿರುವುದು, 60 ಮರಗಳನ್ನು ಕಡಿಯುವುದನ್ನು ತಡೆಗಟ್ಟುವಲ್ಲಿ ಅವರ ಕೊಡುಗೆಯನ್ನು ಸಮೀಕ್ಷೆ ತೀರ್ಪುಗಾರರು  ಪರಿಗಣಿಸಿ ಅವರನ್ನು ಆಯ್ಕೆ ಮಾಡಿದರು.
ಹಸಿರು ಅಭಿವೃದ್ಧಿ, ಗ್ರೀನಥಾನ್ ಕಾರ್ಯಕ್ರಮದ ಮೂಲಕ ಕರ್ನಾಟಕದ ಸುಮಾರು 20000 ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಕಾರ್ಯಕ್ರಮ ಅವರು ಸಂಘಟಿಸಿದ್ದಾರೆ. ಪರಿಸರದ ಬಗೆಗಿನ ಅವರ ಕೊಡುಗೆ ಮರಗಳನ್ನು ಕತ್ತರಿಸುವುದನ್ನು ತಡೆಗಟ್ಟಲು ಮತ್ತು ಉಡುಪಿ ಮತ್ತು ಸುತ್ತಮುತ್ತಲಿನ ಸಸಿಗಳನ್ನು ಪೋಷಿಸಲು ಸಹಾಯ ಮಾಡಿದ್ದಾರೆ. ಅವರು ವಿಶ್ವ ಜಲ ದಿನ, ವಿಶ್ವ ಪರಿಸರ ದಿನ, ವಿಶ್ವ ಭೂ ದಿನ, ವಿಶ್ವ ಓಜೋನ್ ದಿನವನ್ನು ಆಯೋಜಿಸಿ ಪ್ರದೇಶದ ಯುವಕರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಇವರ ಈ ಕೆಲಸ ಜಾಗತಿಕ ಪರಿಸರದ ಮೇಲೆ ಉತ್ತಮ ಪ್ರಭಾವ ಬೀರಿದೆ. ಪರಿಸರ, ಜಲ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ, ನೀರು ಮತ್ತು ನೈರ್ಮಲ್ಯವನ್ನು ಉಳಿಸಲು 20000 ಯುವಕರಿಗೆ ತರಬೇತಿ ನೀಡುವಲ್ಲಿ ಅವರ ದೃಷ್ಟಿಕೋನವು ತೀರ್ಪು ಗಾರರ ಮೆಚ್ಚುಗೆಗೆ ಪಾತ್ರವಾಯಿತು. ಜಿ-ಟೌನ್ ಸೊಸೈಟಿ ನವದೆಹಲಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಬಲವಾಗಿ ಶಿಫಾರಸು ಮಾಡಲಾಯಿತು.
ಡಾ.ಬಾಲಕೃಷ್ಣ ಮದ್ದೋಡಿ ಅವರು ಗೋವಾದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಬಾಲಿವುಡ್ ಸೂಪರ್ ಸ್ಟಾರ್ ನಟಿ ಪ್ರಾಚಿ ದೇಸಾಯಿ ಯವರಿಂದ ಪಡೆದುಕೊಂಡರು. ಡಾ.ಮದ್ದೋಡಿ ಅವರ ಅಮೂಲ್ಯ ಕೊಡುಗೆ ದೇಶದ ಪ್ರಮುಖ ವ್ಯಕ್ತಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
 
 
 
 
 
 
 
 
 
 
 

Leave a Reply