ಉಡುಪಿ ಕಲ್ಯಾಣಪುರ ರೋಟರಿ ಕ್ಲಬ್ ಮತ್ತು ಶ್ರೀ ವಿಘ್ನೇಶ್ವರ ಪ್ರಿಂಟರ್ಸ್ ಮಲ್ಪೆ ಇವರ ವತಿಯಿಂದ ಶಿಕ್ಷಕರ ದಿನಾಚರಣೆಯ ಸಲು ವಾಗಿ ಹೆಬ್ರಿ ಸಮೀಪದ ಶಿವಪುರದ ವಿಶ್ರಾಂತ ಶಿಕ್ಷಕ, ಹರಿದಾಸ ಬಿ. ಸಿ. ರಾವ್, ಶಿವಪುರ ದಂಪತಿಗಳನ್ನು ಅವರ ಸ್ವಗೃಹ ‘ಗುರುಪದ’ ದಲ್ಲಿ ಗೌರವಿಸಿ, ಸಂಮಾನಿಸಲಾಯ್ತು. ರೋಟರಿ ಅಧ್ಯಕ್ಷ ಡೆಸ್ಮಂಡ್ ವಾಸ್ ಸ್ವಾಗತಿಸಿದರು, ಶ್ರೀ ವಿಘ್ನೇಶ್ವರ ಪ್ರಿಂಟರ್ಸ್ ಮಾಲಕ ರೋಟರಿ ಸದಸ್ಯ ಎಂ. ಮಹೇಶ್ ಕುಮಾರ್ ಮಲ್ಪೆ ಪ್ರಸ್ತಾವನೆಗೈದು, ಅಭಿನಂದನಾ ಪತ್ರ ವಾಚಿಸಿ, ಸನ್ಮಾನಿತರನ್ನು ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ರೋಟರಿ ಕಾರ್ಯದರ್ಶಿ, ಲಿಯೋ ವಿಲಿಯಂ ಅಂದ್ರಾದೆ, ಅಹಲ್ಯಾ ಸಿ. ರಾವ್ ಟಿಸಿಎಸ್ ಉದ್ಯೋಗಿ ಬಿ. ಆದರ್ಶ ರಾವ್ ಉಪಸ್ಥಿತರಿದ್ದರು. ಸನ್ಮಾನಿತರು ಈ ಗೌರವ ಮುದ ನೀಡಿದೆ ಎಂದು ಹೇಳಿ ಕೃತಜ್ಞತೆ ಸೂಚಿಸಿದರು. ಚೆಲುವರಾಜ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು, ಶೇಖರ ಪೂಜಾರಿ ವಂದಿಸಿದರು.