ಶ್ರೀ ಶಾಂತಿಮತೀ ಪ್ರತಿಷ್ಠಾನದಿಂದ ಅನುಪಮಾ ಅಡಿಗರಿಗೆ ಗ್ರಹ ಸನ್ಮಾನ

ಶ್ರೀ ಶಾಂತಿಮತೀ ಪ್ರತಿಷ್ಠಾನದ ತಿಂಗಳ “ಸಾಧಕರೆಡೆ ನಮ್ಮ ನಡೆ”  ಕಾರ್ಯಕ್ರಮದ ಅಂಗವಾಗಿ ಇಂದು ಉಡುಪಿ ಕೊಡವೂರಿನ ಲಕ್ಷ್ಮೀ ನಗರದಲ್ಲಿ ಶ್ರೀಮತಿ ಅನುಪಮಾ ಅಡಿಗ ಅವರನ್ನು ಗೌರವಿಸಲಾಯಿತು.  ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೇದ ಬ್ರಹ್ಮ ಶ್ರೀ ಹೃಷೀಕೇಶ ಬಾಯರಿ ಅವರು ಭಾಗವಹಿಸಿದ್ದರು. 

 ಪ್ರತಿಷ್ಠಾನ ದ ಮಾಜಿ ಅಧ್ಯಕ್ಷರಾದ ಪ್ರಸನ್ನ ಭಟ್ ಸ್ವಾಗತಿಸಿ, ವಿದ್ವಾನ್ ಡಾ। ವಿಜಯ ಮಂಜರ್ ಪ್ರಾಸ್ತಾವಿಕ ಭಾಷಣ ಮಾಡಿದರು.  ಗೌರವ ಸ್ವೀಕರಿಸಿ ಮಾತನಾಡಿದ ಅನುಪಮಾ ಅಡಿಗ ಅವರು ತಾನು ಕಂಪ್ಯೂಟರ್ ಇಂಜಿನಿಯರಿಂಗ್ ವೃತ್ತಿಯನ್ನು ಬಿಟ್ಟು ಜ್ಯೋತಿಷ್ಯ ಶಾಸ್ತ್ರದ ಅಧ್ಯಯನ ನಡೆಸಲು ನನ್ನ ಮಾವ ಹಾಗೂ ನನ್ನ ಪತಿಯೇ ಪ್ರೇರಣೆ ಎಂದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಹೃಷಿಕೇಶ ಬಾಯರಿ ಅವರು ಶಾಂತಿಮತೀ ಪ್ರತಿಷ್ಠಾನ ದ ಕೆಲಸಗಳು ಶ್ಲಾಘನೀಯ.  ಪ್ರತಿಷ್ಠಾನ ದ ವತಿಯಿಂದ ಇನ್ನಷ್ಟು ವಿದ್ವಾಂಸರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ನಡೆಯಲಿ ಎಂದು ಹಾರೈಸಿದರು. 

 ಪ್ರತಿಷ್ಠಾನದ ಅಧ್ಯಕ್ಷರಾದ ಚಂದ್ರಶೇಖರ ಅಡಿಗರು ಧನ್ಯವಾದ ಸಮರ್ಪಣೆಗೈದು, ರಾಮಚಂದ್ರ ಉಡುಪ  ನಿರೂಪಿಸಿದರು.  ಶಾಂತಿಮತೀ ಪ್ರತಿಷ್ಠಾನ ದ ಸದಸ್ಯರು, ಕೆನರಾ ಬ್ಯಾಂಕ್ ನ ಮಾಜಿ ಪ್ರಬಂಧಕರಾದ ನಾಯರ್ ಬೆಟ್ಟು ಮಂಜುನಾಥ ಭಟ್, ಹಾಗೂ ಸನ್ಮಾನಿತರ ಹಿತೈಷಿಗಳು ಭಾಗವಹಿಸಿದ್ದರು

 
 
 
 
 
 
 
 
 
 
 

Leave a Reply