ಮಹಿಳೆ ನಾಲ್ಕು ಗೋಡೆಗಳ ನಡುವೆ ಬಂಧಿಯಾಗದೆ ಧೈರ್ಯದಿಂದ ಮುನ್ನಡೆಯಬೇಕು~ಅಕ್ಷತಾ ತಂತ್ರಿ

ಹೂಡೆ ಪಡುತೋನ್ಸೆ ಶ್ರೀದೇವಿ ಬಿಲ್ಲವ ಮಹಿಳಾ ಘಟಕದ ವತಿಯಿಂದ ಮಹಿಳಾ ದಿನಾಚರಣೆ.

ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆ ಯರಿಗೆ ಗ್ರಾಮೀಣ ಸೊಗಡನ್ನು ಬಿಂಬಿಸುವ ಹಲವು ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.

ಸಭಾಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬಹುಮುಖ ಪ್ರತಿಭೆಯ ಸಾಧಕಿ, ಶ್ರೀಮತಿ ಅಕ್ಷತಾ ತಂತ್ರಿ ಪಾಲ್ಗೊಂಡಿದ್ದರು.

ಘಟಕದ ಅಧ್ಯಕ್ಷೆ ಶ್ರೀಮತಿ ಸುನಂದ ಕೆಮ್ಮಣ್ಣು ಅಧ್ಯಕ್ಷತೆ ವಹಿಸಿದ್ದರು. ಘಟಕದ ಪದಾಧಿಕಾರಿಗಳಾದ ಶ್ರೀಮತಿ ಸಹದೇವಿ ಮತ್ತು ಶ್ರೀಮತಿ ಪುಷ್ಪ ಟಿ.ಇವರು ವೇದಿಕೆ ಯಲ್ಲಿ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 4 ಜನ ಮಹಿಳೆಯರನ್ನು ಸನ್ಮಾನಿಸಲಾಯಿತು.

ಮಹಿಳೆ ನಾಲ್ಕು ಗೋಡೆಗಳ ನಡುವೆ ಬಂಧಿಯಾಗದೆ ಧೈರ್ಯದಿಂದ ಮುನ್ನಡೆ ಯಬೇಕು. ಸಾಧನೆ ಮಾಡಲು ಹೊರಟ ಹೆಣ್ಣು ಮಗಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸ ಬೇಕೆಂದು ಮುಖ್ಯ ಅತಿಥಿ, ಅಕ್ಷತಾ ತಂತ್ರಿ ಯವರು ಹೇಳಿದರು.

ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಾಗಿ ಹೂವಿನ ಗಿಡಗಳನ್ನು ನೀಡಲಾಯಿತು. ಇಂದಿರಾ.ಪಿ, ಪರಿಣಿತಾ, ಕವಿತಾ ಇನ್ನಿತರರು ಸಹಕರಿಸಿದರು.

 
 
 
 
 
 
 
 
 
 
 

Leave a Reply