ಆಚಾರ್ಯಾಸ್ ಏಸಿನಲ್ಲಿ ಶಾರ್ವರಿಗೆ ಅಭಿನಂದನೆ 

​​SSLC ವಾರ್ಷಿಕ ಪರೀಕ್ಷೆಯಲ್ಲಿ 625 ರಲ್ಲಿ 623 ಅಂಕ ಗಳಿಸಿದ ಉಡುಪಿ ಮೂಲದ ಬೆಂಗಳೂರಿನ ಶಾರ್ವರಿ ಪೆಜತ್ತಾಯ ಅವರನ್ನು ಉಡುಪಿಯ ಆಚಾರ್ಯಾಸ್ ಏಸಿನಲ್ಲಿ ಅಭಿನಂದಿಸಲಾಯಿತು. ಉಡುಪಿ ತೆಂಕಪೇಟೆಯ ಆಚಾರ್ಯಾಸ್ ಏಸಿನಲ್ಲಿ ಜರಗಿದ ಈ ಸರಳ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ವಾದಿರಾಜ ಆಚಾರ್ಯರು ಎಸೆಸೆಲ್ಸಿ ಯಲ್ಲಿ 623 ಅಂಕ ಗಳಿಸಿದ ಶಾರ್ವರೀ ಪೆಜತ್ತಾಯ ಅವರಿಗೆ ಅಭಿನಂದನಾ ಪತ್ರ, ಸ್ಮರಣಿಕೆ ನೀಡಿ ಸಮ್ಮಾನಿಸಿದರು. ಸಾಂದರ್ಭಿಕವಾಗಿ ಮಾತನಾಡಿದ ವಾದಿರಾಜ ಆಚಾರ್ಯರು ಬಹು ಪ್ರಾಚೀನ ಪೆಜತ್ತಾಯ ವಂಶದ ಹಿರಿಮೆಯನ್ನು ತಿಳಿಸಿ ಶಾರ್ವರಿ ಪೆಜತ್ತಾಯಳಿಗೆ ಶುಭ ಹಾರೈಸಿದರು.

ಬೆಂಗಳೂರಿನ ಜಯ ನಗರದ ಕಾರ್ಮೆಲ್ ಕಾನ್ವೆಂಟ್ ವಿದ್ಯಾಲಯದ ಶಾರ್ವರೀ ಪೆಜತ್ತಾಯ ಅವರು ಪ್ರಸ್ತುತ ಏಸ್ ಸಂಸ್ಥೆಯಲ್ಲಿ ಆನಲೈನ್ ಮುಖಾಂತರ ಎಸೆಸೆಲ್ಸಿಯಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಗರಿಷ್ಟ ಅಂಕ ಗಳಿಸಲು ತಾನು ಅನುಸರಿಸಿದ ರೀತಿ ನೀತಿ ನಿಯಮಗಳನ್ನು ತಿಳಿಸಿ ಈ ನಿಟ್ಟಿನಲ್ಲಿ ತನ್ನ  ಅನುಭವವನ್ನು ವಿದ್ಯಾರ್ಥಿಗಳೊಡನೆ ಹಂಚಿ ಕೊಂಡರು. ಆಚಾರ್ಯಸ್ ಏಸಿನ ಸಂಪನ್ಮೂಲ ವ್ಯಕ್ತಿಗಳಿಂದ ರಚಿತವಾದ ಪಠ್ಯಪುಸ್ತಕಗಳು ಹಾಗೂ ಇಲ್ಲಿನ ಆನಲೈನ್ ತರಗತಿಗಳ ಪ್ರಯೋಜನವನ್ನು ವಿಶೇಷವಾಗಿ ಸ್ಮರಿಸಿಕೊಂಡರು. 

ಈ ಸಂದರ್ಭದಲ್ಲಿ ಬೆಂಗಳೂರಿನ ವಾದಿರಾಜ ಪೆಜತ್ತಾಯ, ಸಹನಾ ಪೆಜತ್ತಾಯ, ಆಚಾರ್ಯ ಏಸಿನ ಉಡುಪಿ ವಿಭಾಗದ ನಿರ್ದೇಶಕರಾದ ಪಿ. ಲಾತವ್ಯ ಆಚಾರ್ಯ, ಪಿ.ಶ್ರೀನಿವಾಸ ಆಚಾರ್ಯ, ಪಿ.ವೃಜನಾಥ ಆಚಾರ್ಯ, ಬ್ರಹ್ಮಾವರ ವಿಭಾಗದ ನಿರ್ದೇಶಕ ಅಕ್ಷೋಭ್ಯ ಆಚಾರ್ಯ, ಸತೀಶ ಕುಂದರ್, ಛಾಯಾಗ್ರಾಹಕ ಹರೀಶ ಗುಂಡಿಬೈಲು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply