ಎಲ್ಲಿರಿಗೂ ಗೊತ್ತಿರುವಂತೆ ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯನವರ ಜನ್ಮದಿನ, ಸೆಪ್ಟೆಂಬರ್ 15 ನ್ನು ಇಂಜಿನೀರ್ಸ್ ದಿನ ಎಂದು ಆಚರಿಸಲಾಗುತ್ತಿದೆ. ಅದು ಎಂಜಿನೀರ್ ವೃತ್ತಿಗೆ ಅವರು ಗೌರವ ತಂದುಕೊಟ್ಟದ್ದನ್ನು ನೆನಪಿಸಿ ಕೊಳ್ಳುವ ಒಂದು ಪ್ರಯತ್ನ.
ವಿಶ್ವೇಶ್ವರಯ್ಯ ಸಾಮಾನ್ಯ ವ್ಯಕ್ತಿಯಲ್ಲ. ಒಂದು ಮಹಾನ್ ಚೇತನ. ಸಿವಿಲ್ ಎಂಜಿನೀರ್ ಗಳಿಗಂತೂ ಸದಾ ಸ್ಫೂರ್ತಿಯ ಸೆಲೆ.
ಅವರು ಕಟ್ಟಿದ ಕೆ. ಆರ್. ಸ್. ಅಣೆಕಟ್ಟು ಆಗ ಏಶ್ಯ ಖಂಡದಲ್ಲೇ ಅತೀ ದೊಡ್ಡ ದಾಗಿತ್ತು. ಮೈಸೂರು ರಾಜ್ಯದ ದಿವಾನರಾಗಿ ಮೈಸೂರು ಬ್ಯಾಂಕ್, ಮೈಸೂರು ವಿಶ್ವವಿದ್ಯಾಲಯ ಸ್ಥಾಪಿಸಿದರು. ಒಬ್ಬ ಎಂಜಿನೀರ್ ಉತ್ತಮ ಆಡಳಿತಗಾರ ನಾಗಬಲ್ಲನೆಂದು ತೋರಿಸಿದರು.
ಈಗ ಕೂಡ ನಮ್ಮ ಐ.ಎ.ಸ್ ನಲ್ಲಿ ಪ್ರತಿಶತ 50 ಕ್ಕಿಂತ ಹೆಚ್ಚು ಇಂಜಿನೀರ್ಸ್ ಆಯ್ಕೆಯಾಗುತ್ತಿದ್ದಾರೆ. ಹೆಮ್ಮೆ ಪಡೋಣ. ಇಂದು ನಾವು ವಿಶ್ವೇಶ್ವರಯ್ಯ ನವರ ದಿನಾಚರಣೆ ಆಚರಿಸುವ ಸಮಯದಲ್ಲಿ ಅವರ ನಡೆನುಡಿಗಳ ಆಚರಣೆ, ಸಾಧ್ಯ ವಾದಷ್ಟು ನಮ್ಮ ವ್ಯವಹಾರದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡೋಣ. ಆ ಮಹಾನ್ ಚೇತನದ ನೆನಪಿಗೆ ನನ್ನ ಗೌರವಪೂರ್ವಕ ನುಡಿ ನಮನ.