ಮುರಲಿ ಕಡೆಕಾರ್ ಅವರಿಗೆ  ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಂದ ಅಭಿನಂದನೆ 

ನಿಟ್ಟೂರು ಪ್ರೌಢಶಾಲೆಯಲ್ಲಿ ಸುದೀರ್ಘ ಕಾಲ ಶಿಕ್ಷಕ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ಸಾಮಾಜಿಕ ಸಾಂಸ್ಕೃತಿಕ ಧುರೀಣ ಮುರಲಿ ಕಡೆಕಾರ್ ಅವರನ್ನು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸೋಮವಾರ ಶ್ರೀ ಮಠಕ್ಕೆ ಆಹ್ವಾನಿಸಿ ಅಭಿನಂದಿಸಿ , ಫಲಮಂತ್ರಾಕ್ಷತೆ ನೀಡಿ ನಿವೃತ್ತ ಜೀವನ ಸುಖ ಸಂತೋಷದಿಂದ ತುಂಬಿರಲೆಂದೂ , ಸಾಮಾಜಿಕ ಕಾರ್ಯಗಳ ಪ್ರವೃತ್ತಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಚೈತನ್ಯವನ್ನೂ ದೇವರು ಕರುಣಿಸಲೆಂದು ಆಶೀರ್ವದಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯಶಿಕ್ಷಕಿಯಾಗಿ ಪದೋನ್ನತಿ ಪಡೆದ ಮುರಲಿ ಕಡೆಕಾರ್ ಅವರ ಪತ್ನಿ ಶ್ರೀಮತಿ ವಿನೋದಾರನ್ನೂ ಶ್ರೀಗಳು ಅಭಿನಂದಿಸಿದರು .

 
 
 
 
 
 
 
 
 
 
 

Leave a Reply