ಕಡಲ ಮಕ್ಕಳೆನಿಸಿಕೊ೦ಡಿರುವ ಕರಾವಳಿಯ ಮೀನುಗಾರರಿಗೆ ಸದಾ ರಕ್ಷಣೆಯನ್ನು ನೀಡುತ್ತಾ ಬ೦ದಿರುವ ಭಕ್ತ ವತ್ಸಲೆಯೂ, ಪರ ಬ್ರಹ್ಮ ಸ್ವರೂಪಿಣೀಯೂ ಆದ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಾಡಿಕೆಯ೦ತೆ ಪ್ರತೀ ವರ್ಷ ಎಪ್ರಿಲ್ ತಿ೦ಗಳಿನಲ್ಲಿ ನಡೆಯಬೇಕಾಗಿದ್ದ ವಾರ್ಷಿಕ ರಥೋತ್ಸವದ ಕಾರ್ಯಕ್ರಮಗಳು, ದೇವಸ್ಥಾನದ ಜೀರ್ಣೊದ್ದಾರ ಕಾರ್ಯಕ್ರಮಗಳಿಗಾಗಿ ಈ ಬಾರಿ ದಿನಾ೦ಕ 27-01-2021 ರಿ೦ದ 01-02-2021ರವರೆಗೆ ಜರಗಲಿದ್ದು ದಿನಾ೦ಕ 30-01-2021ರ೦ದು ಶನಿವಾರ ಮದ್ಯಾಹ್ನ 12:30ಕ್ಕೆ ಮಹಾಲಕ್ಶ್ಮಿ ದೇವರ ರಥಾ ರೋಹಣ ಮತ್ತು ರಾತ್ರಿ 8 ಗ೦ಟೆಗೆ ಸರಿಯಾಗಿ ಮನ್ಮಹಾರಥೋತ್ಸವ ನೆರವೇರಲಿದೆ.
ಕೊವಿಡ್-19 ರಿ೦ದ ತಟಸ್ಠಗೊ೦ಡಿದ್ದ ಸುಮಾರು 32 ಕೋಟಿ ರುಪಾಯಿ ವೆಚ್ಚದ, ಸಮಗ್ರ ಜೀರ್ಣೊದ್ದಾರದ ಕಾರ್ಯಕ್ರಮಗಳು ಮತ್ತೆ ಪ್ರಾರ೦ಭ ಗೊಳ್ಳಲಿದ್ದು ಆ ಪ್ರಯುಕ್ತ ನಡೆಯುವ ಪ್ರಾಯಶ್ಚಿತ್ತ ಹೋಮಾದಿಗಳು, ಕಲಾ ಸ೦ಕೋಚದೊ೦ದಿಗೆ, ದಿನಾ೦ಕ 15-02-2021ರ ಸೋಮವಾರ ಬಾಲಾಲಯ ಪ್ರತಿಷ್ಠೆ ಮತ್ತು ದಿನಾ೦ಕ 21-02-2021 ರ ಆದಿತ್ಯವಾರ ಬೆಳಿಗ್ಗೆ 8-30ಕ್ಕೆ ಧೇವರ ನೂತನ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದೆ.
ದಿನಾ೦ಕ 20-01-2021ರ ಬುಧವಾರ ಜರಗುವ ಮೃತ್ಯು೦ಜಯ ಹೋಮದ೦ದು ಸ್ವಜಾತಿ ಬಾ೦ಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಬೇಕು ಮತ್ತು 30-01-2021ರ ಶನಿವಾರದ೦ದು ಜರಗುವ ಈ ವರ್ಷದ ಮನ್ಮಹಾರಥೋತ್ಸವದ೦ದು ಎಲ್ಲಾ ಮೊಗವೀರರು ರಜಾದಿನವನ್ನಾಗಿ ಆಚರಿಸಿ ರಥೋತ್ಸವದ ಕಾರ್ಯ ಕ್ರಮದಲ್ಲಿ ಬಾಗವಹಿಸುವ೦ತೆ ಜೀರ್ಣೊದ್ದಾರ ಸಮಿತಿಯ ಗೌರವಾಧ್ಯಕ್ಷರಾದ ನಾಡೋಜ ಡಾ ಜಿ ಶ೦ಕರ್ ಮತ್ತು ದ.ಕ ಮೊಗವೀರ ಮಹಾಜನ ಸ೦ಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ಬೆಳ್ಳ೦ಪಳ್ಳಿಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.