ಮಲ್ಪೆ~ ‘ಪೊರ್ಲುಡೆ ಪೊರ್ಲು ನಮ್ಮ ತುಳುನಾಡು’. ತುಳುವರ ಮಾತೃಭಾಷೆ ತುಳು. ಈ ಸುಂದರಭಾಷೆಯನ್ನು ಎಷ್ಟು ಬಣ್ಣಿಸಿದರೂ ಸಾಲದು. ಮೇರು ಮಟ್ಟದ ಇತಿಹಾಸ ಇರುವ ತುಳುಭಾಷೆಗೆ ಸ್ವಂತ ಲಿಪಿ ಇದೆಎಂದು ಡಾ|ವೆಂಕಟರಾಜ ಪುಣಿಂಚಿತ್ತಾಯರು ತಮ್ಮ ಸಂಶೋಧನೆಯ ಮೂಲಕ ಜಗತ್ತಿಗೆಸಾರಿದರು. ಆದರೆ ಇಂದು ಹೆಚ್ಚಿನವರಿಗೆ ತುಳು ಲಿಪಿ ಇದೆ ಎಂದು ಗೊತ್ತಿದ್ದರೂ ಕಲಿಯಲು ಉದಾಸೀನ, ಭಾಷೆಯ ಮೇಲೆ ತಾತ್ಸಾರ.
ಹಾಗಿರುವಾಗ ಶ್ರೀ ಕೃಷ್ಣನ ಊರು ಉಡುಪಿಯ ತುಳು ಮಹಾಕವಿ ಕೊಡವೂರಿನ ಅರುಣಾಬ್ಜರು ಹುಟ್ಟಿದ ಊರಿನ ಹತ್ತಿರದ ಊರಾದ ಮಲ್ಪೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ, ಬಿಲ್ಲವ ಸೇವಾ ಸಂಘ ಮಲ್ಪೆ ಮತ್ತು ಜೈ ತುಳುನಾಡ್ (ರಿ) ಇವರುಗಳ ಜಂಟಿ ಆಶ್ರಯದಲ್ಲಿ ಶ್ರೀ ನಾರಾಯಣಗುರು ಸಮುದಾಯ ಭವನ ಮಲ್ಪೆಯಲ್ಲಿ ತುಳು ಲಿಪಿ ಕಾರ್ಯಗಾರ ಬಲುಅಚ್ಚು ಕಟ್ಟಾಗಿ ನಡೆದಿತ್ತು.ತುಳುಲಿಪಿ ಶಿಕ್ಷಕರು ಉಷಾ ಎನ್. ಪೂಜಾರಿ, ರಾಜೇಶ್ ಪೂಜಾರಿ ತುಳುವೆ, ಉಜ್ವಲ ಎನ್. ಪೂಜಾರಿ, ದೀಪಶ್ರೀ ಪೂಜಾರಿ, ವಿಜಯ್ ವಿಕ್ಕಿ ಪೂಜಾರಿ ಇವರುಗಳ ಉಮೇದುದಾರಿಕೆಯಲ್ಲಿ ತುಳುಲಿಪಿ ಕಲ್ಪಾರ್ಥಿಗಳಿಗೆ ತುಳುಲಿಪಿ ಪರೀಕ್ಷೆ ನಡೆಯಿತು.
ಉದ್ಯೋಗ ಶಿಕ್ಷಣದ ನಡುವೆ ಉಚಿತವಾಗಿತುಳುಲಿಪಿಯನ್ನು ಎಲ್ಲರಿಗೂ ಕಲಿಸುವ ಇವರುಗಳ ಕಾರ್ಯ ನಿಸ್ವಾರ್ಥ ಸೇವೆ ಮೆಚ್ಚುವಂತಹದ್ದು. ಉಚಿತ ತುಳುಲಿಪಿ ಕಾರ್ಯಗಾರದಲ್ಲಿ ಪಾಲು ಪಡೆದ ಕಿರಿಯರು, ಹಿರಿಯರು ಎಲ್ಲಾವಯೋಮಿತಿಯವರು ಪರೀಕ್ಷೆ ಬರೆದರು.
ಯಾವುದೇ ರೀತಿಯಾದ ಉತ್ತಮ ಶಿಕ್ಷಣವನ್ನು ಪಡೆಯಲು ವಯಸ್ಸು ಅಡ್ಡಿ ಬರುವುದಿಲ್ಲ ಎಂದು ತುಳುಲಿಪಿ ಪರೀಕ್ಷೆ ಬರೆದು ಹಿರಿಯರಾದ ಸರ್ವೋತ್ತಮ್ ಪೂಜಾರಿ ಮತ್ತು ಜಯಂತಿ ಎಂ.ಬಂಗೇರ ಟೀಚರ್ ಸಾಬೀತು ಪಡಿಸಿದರು.ತುಳು ಲಿಪಿ ಕಲ್ಪಾರ್ಥಿ ನಿವೇದಾ ವಿದ್ಯಾಮಾತೆ ಸರಸ್ವತಿ ಸ್ತುತಿಯನ್ನು ಪರೀಕ್ಷೆ ಪ್ರಾರಂಭವಾಗುವ ಮುನ್ನಪಠಿಸಿದರು.
ಮಲ್ಪೆ ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಸುನೀಲ್ ದಾಸ್ ಎಂ. ಮತ್ತು ಮಲ್ಪೆ ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷ ಆಶಾ ಜಗದೀಶ್ ಬಂಗೇರ, ಹರೀಶ್ ಪೂಜಾರಿ ಕೊಪ್ಪಲ್ ತೋಟ, ಚಂದ್ರಶೇಖರ ಪೂಜಾರಿ, ಸತೀಶ್ ಕೊಡವೂರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.