​ನಾನು ದನದ ಮಾಂಸ ತಿನ್ನುತ್ತೇನೆ, ಅದನ್ನುಕೇಳೋಕೆ ನೀವ್ಯಾರು?

ನಾನು ದನದ ಮಾಂಸ ತಿನ್ನುತ್ತೇನೆ ಅದನ್ನು ಬೇಡ ಎನ್ನಲು ನೀವ್ಯಾರು?  ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೋ ಹತ್ಯೆ ನಿಷೇಧ ಕಾನೂನನ್ನು ಬಲವಾಗಿ ವಿರೋಧಿಸಿ, ನನ್ನ ಆಹಾರ ನನ್ನ ಹಕ್ಕು ಎಂದಿದ್ದಾರೆ.
ಗೋ ಹತ್ಯೆ ನಿಷೇಧ ಇದೇನು ಮೊದಲಲ್ಲ. ನಾನು ದನದ ಮಾಂಸ ತಿನ್ನುತ್ತೇನೆ. ಅದನ್ನು ಕೇಳಲು ನೀವು ಯಾರು? ನಾನು ತಿನ್ನುತ್ತೇನೆ ಹೊರತು ನೀನು ತಿನ್ನು ಎಂದು ನಾನು ಬಲವಂತ ಮಾಡುವುದಿಲ್ಲ. ನನ್ನ ಆಹಾರ ನನ್ನಿಷ್ಟ, ನನ್ನ ಹಕ್ಕು ಎಂದು ಸಿದ್ದರಾಮಯ್ಯ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಮುದಿ ಎತ್ತು, ಹಸು, ಕೋಣಗಳನ್ನು ಸಾಕಲಾಗದೆ ಬಡವರು ಹೈರಾಣಾಗಿದ್ದಾರೆ. ಇಂಥವುಗಳನ್ನು ಏನು ಮಾಡಬೇಕು? ನನ್ನ ಸಿದ್ಧಾಂತಕ್ಕೆ ನಾನು ಯಾವಾಗಲೂ ಬದ್ಧ ಎಂದಿದ್ದಾರೆ.​
 
 
 
 
 
 
 
 
 
 
 

Leave a Reply